ಮರೋಡಿ: ಊರವರಿಂದ ಶ್ರಮದಾನ, ಕಳೆಗಿಡಗಂಟಿಗಳ ತೆರವು

Suddi Udaya

ಮರೋಡಿ :ಮರೋಡಿ ಹಾರೊದ್ದು ಸೇತುವೆಯ ಬದಿಯಲ್ಲಿರುವ ಕಳೆ ಗಿಡ ಗಂಟಿಗಳಿಂದ ವಾಹನ ಚಾಲಕರಿಗೆ ಎದುರಿನಲ್ಲಿ ಬರುವ ವಾಹನಗಳು ಕಾಣದೆ ಸಣ್ಣ ಪುಟ್ಟ ಪ್ರಮಾಣದ ಅಪಘಾತಗಳು ಸಂಭವಿಸುತ್ತಿತ್ತು. ಆದುದರಿಂದ ಇನ್ನೂ ಮುಂದಕ್ಕೆ ಇಂತಹ ವಾಹನ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.

ಶ್ರಮದಾನದಲ್ಲಿ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾಜ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.

Leave a Comment

error: Content is protected !!