ಧರ್ಮಸ್ಥಳ ವಲಯದ ಕಾಯರ್ತಡ್ಕ – ಕಳೆಂಜ ಎ ಒಕ್ಕೂಟದ ಸಭೆ: ಮಾಶಾಸನದ ಮಂಜೂರಾತಿ ಪತ್ರ ಹಸ್ತಾಂತರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯದ ಕಾಯರ್ತಡ್ಕದಲ್ಲಿ ಕಾಯರ್ತಡ್ಕ ಹಾಗು ಕಳೆಂಜ ಎ ಒಕ್ಕೂಟದ ಸಭೆಯನ್ನು ನಡೆಸಲಾಯಿತು.

ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಂಜೂರು ಮಾಡಿರುವ ರೂ.1000 ಮಾಶಾಸನದ ಮಂಜೂರಾಗಿ ಪತ್ರವನ್ನು ಶ್ರೀಮತಿ ಅಂಬಿಕಾರವರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಯರ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಧರ್ಮಪ್ಪ ಕುಂಬಾರ ಹಾಗೂ ಕಳೆಂಜ ಎ ಒಕ್ಕೂಟದ ಅಧ್ಯಕ್ಷರಾದ ಉಮೇಶ್, ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ, ಕಾಯರ್ತಡ್ಕ ಸೇವಾಪ್ರತಿನಿಧಿ ಜನಾರ್ಧನ್, ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!