ಅಂಗಡಿ ಮುಂದೆ ಕುಳಿತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಆರೋಪ : ಧರ್ಮಸ್ಥಳ ಪೊಲೀಸರಿಗೆ ದೂರು

Suddi Udaya

ಕೊಕ್ಕಡ: ಅಂಗಡಿ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದ ನನಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ, ಕೊಕ್ಕಡ ಪಿಜಿನಡ್ಕ ನಿವಾಸಿ ಮಂಚ್ಚ ಮುಗೇರ ಅವರು ಸೆ.೧ರಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.


ಸೆ.೦೧ರಂದು ಹಳ್ಳಂಗೇರಿಯ ರಾಮಣ್ಣ ಗೌಡರ ಅಂಗಡಿ ಬಳಿ ಬರುತ್ತಿದ್ದಂತೆ ಮಳೆ ಸುರಿದಿದ್ದು, ಛತ್ರಿ ಇಲ್ಲದ ಕಾರಣ ನಾನು ಅಂಗಡಿಯ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದು, ಈ ವೇಳೆ ಬಂದ ರಾಮಣ್ಣ ಗೌಡ ಇಲ್ಲೇಕೆ ಕುಳಿತ್ತಿದ್ದ ಎಂದು ಪ್ರಶ್ನಿಸಿ, “ನೀವು ನಿಮ್ಮ ಜಾತಿಯ ಬುದ್ದಿಯನ್ನು ಬಿಡುವುದಿಲ್ಲ ಎಂದು” ಹೇಳಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಅದೇ ರಸ್ತೆಯಲ್ಲಿ ಕೆಲಸ ಬಿಟ್ಟು ಬರುತ್ತಿದ್ದ ಅವರ ಸೊಸೆ (ಮಗನ ಪತ್ನಿ) ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರು ನೀಡಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!