ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಆಟೋಟ ಸ್ಪರ್ದೆಗಳು, ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ,

Suddi Udaya

ಬೆಳ್ತಂಗಡಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮ ಮಹಿಳಾ ವೃಂದದ ಸಭಾಂಗಣದಲ್ಲಿ ಸೆ.1 ರಂದು ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರ ಅಶೋಕ್ ವಹಿಸಿದ್ದರು

ಪುಟಾಣಿಗಳಗೆ ಮುದ್ದುಕೃಷ್ಣ, ಬಾಲಕೃಷ್ಣ,ಕೃಷ್ಣ-ರಾಧೆ ಸ್ಪರ್ದೆಗಳು ನಡೆಯಿತು. ಸುಮಾರು ಮಕ್ಕಳು ಭಾಗವಹಿಸಿ ಕೃಷ್ಣನ ಲೀಲೆಗಳನ್ನು ತೋರ್ಪಡಿಸಿ ಬಹುಮಾನ ಪಡೆದರು.

ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಶ್ಲೋಕಗಳು, ಶಂಖ ಊದುವ ಸ್ಪರ್ಧೆಯನ್ನು ನಡೆಸಲಾಯಿತು.

ಸಂಧ್ಯಾ ಪಾಳಂದೇ ಪ್ರಾರ್ಥಿಸಿ, ಉಮಾ ಆರ್ ರಾವ್ ಪ್ರಾಸ್ತಾವಿಕ ಮಾತನಾಡಿ ,ಸ್ವಾಗತಿಸಿದರು. ಹೇಮಾವತಿ ಕೆ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ಮಹಾವೀರ ಕಾಲೇಜು ಮೂಡಬಿದ್ರೆ ಸಂಸ್ಕೃತ ವಿಭಾಗದ ಉಪನ್ಯಾಸಕಿ ದಿವ್ಯ ಡೋಂಗ್ರೆ, ಮುಂಡಾಜೆ ಜೂನಿಯರ್ ಕಾಲೇಜ್ ಕನ್ನಡ ಉಪನ್ಯಾಸಕಿ ವಸಂತಿ ವೆಂಕಟೇಶ್ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೀತಿ ರತೀಶ್ ರಾವ್ ವಂದಿಸಿದರು.

ಮಹಿಳಾ ವೃಂದದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Comment

error: Content is protected !!