22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆಯ ಸಿದ್ಧವನದಲ್ಲಿ ಶಂಕರ ಜಯಂತಿ

ಉಜಿರೆ: ‘ ಆಚಾರ್ಯ ತ್ರಯರಲ್ಲಿ ಶಂಕರರದ್ದು ದೊಡ್ಡ ಹೆಸರು. ಭಾರತದ ಇಕ್ಕೆಲೆಗಳಲ್ಲಿ ಸಂಚರಿಸಿ ಧರ್ಮದ ಪುನರುತ್ಥಾನ ಮಾಡಿದ ಮಹಾನುಭಾವರು. ಪ್ರಸ್ಥಾನತ್ರಯ ಭಾಷ್ಯ ರಚನೆಯೇ ಮುಂತಾದ ಅನೇಕ ಕೃತಿಗಳನ್ನು ಲೋಕಕ್ಕೆ ನೀಡಿದ ಮಹಾನ್ ದಾರ್ಶನಿಕರು. ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ , ವೇದಾದಿಗಳನ್ನು , ಶಾಸ್ತ್ರಗಳ ಜ್ಞಾನದೀವಿಗೆ ಪಡೆದು ಲೋಕಕ್ಕೆ ಹೊಸ ಬೆಳಕನ್ನು ನೀಡಿದವರು ಶಂಕರರು ‘ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಹೇಳಿದರು.

ಇವರು ಉಜಿರೆಯ ಸಿದ್ದವನ ಗುರುಕುಲದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದ ಅಭ್ಯಾಗತರಾಗಿ ಮಾತನಾಡಿದರು.

ಗುರುಕುಲದ ಪ್ರಧಾನ ಪಾಲಕರಾದ ಕೇಶವ ನಾಯ್ಕ್ ಅಧ್ಯಕ್ಷತೆ ವಹಿಸಿ ಶಂಕರರ ಜೀವನದ ಬಗ್ಗೆ ಮಾತನಾಡಿದರು.
ಸಹ ಪಾಲಕರಾದ ಸಚಿನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ರೋಹಿತ್ ನಿರೂಪಿಸಿ ವಂದಿಸಿದರು.

Related posts

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಸೆ.28: ಬೆಳ್ತಂಗಡಿ ರಾಜ ಕೇಸರಿ ಸೇವಾ ಟ್ರಸ್ಟ್ ವತಿಯಿಂದ ನಾವೂರಿನಲ್ಲಿ ಉಚಿತ ನೇತ್ರಾ ಮತ್ತು ಹೃದಯ ತಪಾಸಣಾ ಶಿಬಿರ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್

Suddi Udaya

ನಾವೂರು: ಯುವಕ ನೇಣುಬಿಗಿದು‌ ಆತ್ಮಹತ್ಯೆ

Suddi Udaya

ಕಡಿರುದ್ಯಾವರ: ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು: ಅಪಾರ ಕೃಷಿ ನಾಶ

Suddi Udaya

ಬುರುಡೆ ಪ್ರಕರಣದಲ್ಲಿ ಹಣ ಫಂಡಿಂಗ್ ಪ್ರಕರಣ; ತಿಮರೋಡಿಯ 11 ಮಂದಿ ಆಪ್ತರಿಗೆ ಎಸ್‌.ಐ.ಟಿ ನೋಟಿಸ್

Suddi Udaya
error: Content is protected !!