July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ (ತೆನೆ ಹಬ್ಬ)

ಬೆಳ್ತಂಗಡಿ: ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ(ತೆನೆ ಹಬ್ಬ)ವನ್ನು ಸೆ.8ರಂದು ಆಚರಿಸಲಾಯಿತು. ಈ ಹಬ್ಬವನ್ನು ಮಾತೆ ಕನ್ಯಾ ಮರಿಯಮ್ಮರ ಹುಟ್ಟು ಹಬ್ಬದಂದು ಆಚರಿಸುವುದು ರೂಡಿ. ಬೆಳ್ತಂಗಡಿ ಚರ್ಚ್ ಬಸ್ ಸ್ಟ್ಯಾಂಡ್ ಬಳಿಯ ಸರ್ವಿಸ್ ರೋಡ್ ಬಳಿ ತೆನೆಯನ್ನು ಆಶೀರ್ವಾದಿಸಿ ದೇವರ ಶುಭ ಸಂದೇಶವನ್ನು ಚರ್ಚ್ ಧರ್ಮ ಗುರುಗಳಾದ ವಂದನಿಯ ವಾಲ್ಟರ್ ಡಿಮೆಲ್ಲೊರವರು ತುಳುವಿನಲ್ಲಿ ನೀಡಿದರು.

ವಂದನೀಯ ಗುರುಗಳಾದ ಕ್ಲಿಫರ್ಡ್ ಪಿಂಟೊ ರವರು ತೆನೆಯನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಂದನೀಯ ಗುರುಗಳಾದ ಜೇಸುದಾಸ್ ಕೂಡ ಉಪಸ್ಥಿತರಿದ್ದರು. ಮೆರವಣಿಗೆ ನಡೆದು ಚರ್ಚ್ನಲ್ಲಿ ಬಲಿಪೂಜೆ ನಡೆಯಿತು. ಹಲವಾರು ಭಕ್ತರು ಈ ಬಲಿಪೂಜೆಯಲ್ಲಿ ಪಾಲುಗೊಂಡರು. ಬಲಿಪೂಜೆಯ ನಂತರ ಎಲ್ಲಾ ಭಕ್ತರಿಗೆ ಸಿಹಿ ಹಂಚಲಾಯಿತು ಹಾಗೂ ಎಲ್ಲಾ ವಾಹನಗಳನ್ನು ಆಶೀರ್ವಾದಿಸಲಾಯಿತು. ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಹೊಸ ಊಟವನ್ನು ಸವಿಯುವುದೊಂದಿಗೆ ಸಹಬಾಳ್ವೆಯ ಸಂದೇಶವನ್ನು ಸಾರಲಾಯಿತು.

Related posts

ಕೊಯ್ಯೂರಿನಲ್ಲಿ ಸಿಡಿಲು ಬಡಿದು ದನ ಸಾವು

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೂತುವಾರು ಮತದಾನದ ವಿವರ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗಿಡ ನಾಟಿ ಉತ್ಸವ

Suddi Udaya

ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿಯ ರಾಜ್ಯ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಸುಕುಮಾರ್ ರವರಿಗೆ ಅಭಿನಂದನೆ: ವಗಾ೯ವಣೆಗೊಂಡ ಉಪನ್ಯಾಸಕ ಗಣಪತಿ ಭಟ್ ರವರಿಗೆ ಬೀಳ್ಕೊಡುಗೆ

Suddi Udaya

ಅಂತರಾಷ್ಟ್ರೀಯ ಯುವ ಶೃಂಗಸಭೆಯಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನನ್ನು ಪ್ರತಿನಿಧಿಸಿದ ಡಾ. ವಾಜಿದ ಬಾನು

Suddi Udaya

ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವದ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!