ಜೆಸಿಐ ಬೆಳ್ತಂಗಡಿ ಮಂಜಶ್ರೀ ವತಿಯಿಂದ ಎಕ್ಸೆಲ್ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ, ಮಂಜುಶ್ರೀ ಇದರ ವತಿಯಿಂದ ಶ್ರಾವಣ ತರಬೇತಿ ಕಾರ್ಯಕ್ರಮದ ಪ್ರಯುಕ್ತ How to Focus on career ಎಂಬ ವಿಷಯದಲ್ಲಿ ತರಬೇತಿಯನ್ನು ನಡೆಸಲಾಯಿತು.

ಎಕ್ಸೆಲ್ ಪಿಯು ಕಾಲೇಜಿನಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಜೆಸಿಐ ವಲಯ ತರಬೇತುದಾರರಾದ ಶಂಕರ್ ರಾವ್ ರವರು ನಡೆಸಿಕೊಟ್ಟರು.

ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್.ಡಿ ಸ್ವಾಗತಿಸಿ ತರಬೇತಿಗೆ ಅವಕಾಶ ಮಾಡಿಕೊಟ್ಟ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ ಧನ್ಯವಾದವನ್ನು ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮಾರಿಕೆ, ಕ್ಯಾಂಪಸ್ ಮೇಲ್ವಿಚಾರಕರಾದ ಶಾಂತಿ ರಾಜ್ ಜೈನ, ಘಟಕದ ಉಪಾಧ್ಯಕ್ಷರಾದ ಹೇಮಾವತಿ.ಕೆ, ಕಾರ್ಯದರ್ಶಿ ಅನುದೀಪ್ ಜೈನ್, ಜೆಜೆಸಿ ಅಧ್ಯಕ್ಷ ಸಮನ್ವಿತ್ ಉಪಸ್ಥಿತರಿದ್ದರು

Leave a Comment

error: Content is protected !!