ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಜೆಸಿ ಸಪ್ತಾಹ ಅಂಗವಾಗಿ ಹೂಗುಚ್ಚ ತಯಾರಿಕಾ ತರಬೇತಿ ಕಾರ್ಯಕ್ರಮ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಜೆಸಿ ಸಪ್ತಾಹದ 2024 ಅಂಗವಾಗಿ ಆರನೇ ದಿನ ಹೂವು ಗುಚ್ಚ ತಯಾರಿಕಾ ತರಬೇತಿ ಕಾರ್ಯಕ್ರಮವನ್ನು ಕುಶಾಲಾವತಿ ವಳಂಬಲ ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಖಲತಾ ರೈ ಉಪಸ್ಥಿತರಿದ್ದು ತರಬೇತಿ ನೀಡಿದರು. ಕಾರ್ಯಕ್ರಮದ ಯೋಜನೆ ನಿರ್ದೇಶಕರಾದ ಕೆ ಶ್ರೀಧರ್ ರಾವ್, ದಕ್ಷ ಜೈನ್, ಹಾಗೂ ಜೆಸಿಐನ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಲೇಡಿ ಜೆಸಿ ಅಧ್ಯಕ್ಷರಾದ ಶೋಭಾ ಪಿ ನಿರೂಪಿಸಿದರು. ಜೆಸಿ ವಾಣಿ ಧನುಶ್ ಜೈನ್ ವರದಿ ವಾಚಿಸಿದರು, ಜೆಸಿಐ ಅಧ್ಯಕ್ಷ ಸಂತೋಷ್ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ಅಕ್ಷತ್ ರೈ ಧನ್ಯವಾದವಿತ್ತರು.

Leave a Comment

error: Content is protected !!