ಬ೦ಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: ರೂ. 1020.75 ಕೋಟಿ ವ್ಯವಹಾರ, ರೂ. 4.30 ಕೋಟಿ ಲಾಭ, ಶೇ. 17 ಡಿವಿಡೆಂಡ್

Suddi Udaya

ಬ೦ಗಾಡಿ : ಬ೦ಗಾಡಿ ಸಹಕಾರಿ ವ್ಯವಸಾಯಿಕ ಸ೦ಘ, ಇದರ ಮಹಾಸಭೆಯು ಸೆ.17 ರ೦ದು ಕೊಲ್ಲಿ ಶ್ರೀ ದುರ್ಗಾ ದೇವಿ ಕಲಾ ಮಂದಿರದಲ್ಲಿ ಸ೦ಘದ ಅಧ್ಯಕ್ಷ ಹರೀಶ್ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಂಘವು 2023-24 ನೇ ಸಾಲಿನಲ್ಲಿ ರೂ.221.11 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಮತ್ತು 2023-24ನೇ ಸಾಲಿನಲ್ಲಿ ಸದಸ್ಯರಿಗೆ ರೂ.153.50 ಕೋಟಿ ಸಾಲ ವಿತರಿಸಲಾಗಿದ್ದು, ವರ್ಷಾ೦ತ್ಯಕ್ಕೆ ರೂ.175.02 ಕೋಟಿ ಹೊರ ಬಾಕಿ ಸಾಲ ಹೊ೦ದಿದ್ದು, ಹಾಗೂ ಸದಸ್ಯರ ಸಹಕಾರದಿ೦ದ ಸ೦ಘವು ರೂ.127.16 ಕೋಟಿ ಠೇವಣಿಯನ್ನು ಹೊಂದಿ ವರದಿ ಸಾಲಿನಲ್ಲಿ ಸದಸ್ಯರ ಸಹಕಾರದಿಂದ ಶೇ. 99.45% ಸಾಲ ವಸೂಲಾತಿ ಸಾಧ್ಯವಾಗಿದೆಯೆಂದು ಸಭೆಗೆ ತಿಳಿಸಿದರು. ಸ೦ಘವು ಸಾಲ ನೀಡಿಕೆಯಲ್ಲಿ ಕೃಷಿ ಸಾಲಗಳಿಗೆ ಒತ್ತು ನೀಡುತ್ತಿದ್ದು, ಒಟ್ಟು ಹೊರಬಾಕಿ ಸಾಲದಲ್ಲಿ ರೂ.74.41 ಕೋಟಿ ಕೃಷಿ ಸಾಲ ಹಾಗೂ ಸಂಘದ ಸ್ವಂತ ಬಂಡವಾಳದಿಂದ ರೂ. 100.61 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ.

ಸ೦ಘವು ವರದಿ ಸಾಲಿನಲ್ಲಿ ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿದೆ ಹಾಗೂ ವರ್ಷಾ೦ತ್ಯಕ್ಕೆ ರೂ. 7.05 ಕೋಟಿ ಪಾಲು ಬ೦ಡವಾಳವನ್ನು ಹೊ೦ದಿದ್ದು, ರೂ.1020.75 ಕೋಟಿ ವ್ಯವಹಾರವನ್ನು ಮಾಡಿ, ರೂ.4,30,73,720.24 ಲಾಭವನ್ನು ಹೊಂದಲು ಸಾಧ್ಯವಾಗಿದೆ. ಸಂಘವು ಪುತ್ತೂರು ಉಪವಿಭಾಗದಲ್ಲೇ ಅತೀ ಹೆಚ್ಚು ವ್ಯವಹಾರ ಹಾಗೂ ಲಾಭಗಳಿಸಿ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಸಂಘದ ಈ ಪ್ರಗತಿಗಾಗಿ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಗಳ ಪರಿಶ್ರಮವನ್ನು ಅಧ್ಯಕ್ಷರು ಈ ಸಂದರ್ಭದಲ್ಲಿ ಸ್ಮರಿಸಿದರು. ಸಂಘದ ಬೈಲಾ ಪ್ರಕಾರ ಲಾಭವನ್ನು ವಿಂಗಡಿಸಿ ಶೇ 17 ಡಿವಿಡೆ೦ಡನ್ನು ಘೋಷಿಸಿಸಲಾಯಿತು.


ಕೇಂದ್ರ ಸರಕಾರದ PACS as Msc ಯೋಜನೆಯಡಿ ಕಡಿರುದ್ಯಾವರ ಹಾಗೂ ಕನ್ಯಾಡಿಯ ಪಡ್ಪು ಎಂಬಲ್ಲಿ ಕಟ್ಟಡ ನಿರ್ಮಿಸಲು ರೂ1.19 ಕೋಟಿ ಯಂತೆ ಒಟ್ಟು ರೂ. 2.37 ಕೋಟಿ ಸಾಲವು ಶೇ 3 ರ ದರದಲ್ಲಿ ನಬಾರ್ಡಿನಿಂದ ಮಂಜೂರಾತಿಯಾಗಿರುತ್ತದೆ. ಈ ಸಾಲ ಯೋಜನೆಯಲ್ಲಿ ಸರಿಯಾದ ಮರುಪಾವತಿಗೆ ಶೇ.2 ಬಡ್ಡಿ ದರವು ಪುನರ್ದನ ಲಭ್ಯವಾಗಲಿರುವುದರಿಂದ ಸಂಘಕ್ಕೆ ಶೇ 1 ಬಡ್ಡಿ ದರದಲ್ಲಿ ಸಾಲವು ಲಭ್ಯವಾಗಲಿದೆ.

ಸ೦ಘವು ಸದಸ್ಯರಿಗೆ ಗರಿಷ್ಟ ಪ್ರಮಾಣದ ಸೇವೆಯನ್ನು ನೀಡುತ್ತಿದ್ದು, ಸ೦ಘವು ಶಾಖೆಗಳಲ್ಲಿ ರಸಗೊಬ್ಬರ, ಕ್ರಿಮಿನಾಶಕ, ಸಿಮೆ೦ಟ್, ಕೃಷಿ ಉಪಕರಣ, ಪೈಪ್ ಪಿಟ್ಟಿ೦ಗ್, ಗ್ರಾಹಕ ವಸ್ತುಗಳನ್ನು ಮಾರಟ ಮಾಡುತ್ತಿದ್ಧು, ವರದಿ ಸಾಲಿನಲ್ಲಿ ರೂ 9.77 ಕೋಟಿ ಮಾರಟ ವ್ಯವಹಾರವನ್ನು ಮಾಡಿ ರೂ 11,00,938.08 ಮಾರಟ ಲಾಭವನ್ನು ಗಳಿಸಿರುತ್ತದೆ. ಸ೦ಘವು ಗ್ರಾಹಕರ ಹಾಗೂ ಸದಸ್ಯರ ಸಹಕಾರದಿ೦ದ ಅಭಿವೃದ್ದಿಯನ್ನು ಹೊ೦ದಿದ್ದು, ಹೆಚ್ಚಿನ ಸೇವೆಯನ್ನು ನೀಡಲು ಸ೦ಘಕ್ಕೆ ಠೇವಣಿಯ ಅಗತ್ಯವಿದ್ದು, ಇದಕ್ಕೆ ಸದಸ್ಯರ ಸಹಕಾರವನ್ನು ಕೊರಲಾಯಿತು.

ಸಭೆಯಲ್ಲಿ ಸಂಘದ ಕಾರ್ಯ ವ್ಯಾಪ್ತೀಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದಲ್ಲಿ 382 ನವೋದಯ ಸ್ವ-ಸಹಾಯ ಗುಂಪುಗಳು ಕಾರ್ಯಚರಿಸುತ್ತಿದ್ದು, ಇದರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ 19 ಗುಂಪುಗಳನ್ನು ಗೌರವಿಸಲಾಯಿತು.
2023-24 ಸಾಲಿನಲ್ಲಿ ಸಂಘದ ಕಾರ್ಯ ವ್ಯಾಪ್ತೀಯ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಯಲ್ಲಿ 77 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ ಶೇ 70 ಕ್ಕಿಂತ ಹೆಚ್ಷು ಅಂಕ ಗಳಿಸಿ ತೆರ್ಗಡೆಗೊಂಡ 84 ವಿದ್ಯಾರ್ಥಿಗಳಿಗೆ ಒಟ್ಟು 143 ವಿದ್ಯಾರ್ಥಿಗಳಿಗೆ 25೦೦.೦೦ ರೂ ನಂತೆ ಸಂಘದ ವಿಧ್ಯಾನಿಧಿಯಿಂದ ರೂ:3,57500.೦೦ ವಿಧ್ಯಾರ್ಥಿ ವೇತನವನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಸಂತ ಗೌಡ, ನಿರ್ದೇಶಕರಾದ ಎನ್.ಲಕ್ಷ್ಮಣ ಗೌಡ, ಎಬಿ ಉಮೇಶ್, ಶ್ರೀಮತಿ ತನುಜಾ ಶೇಖರ್, ಆನಂದ ಗೌಡ ಬಿ, ರಮೇಶ್ ಕೆಂಗಾಜೆ, ವಿನಯ ಚಂದ್ರ, ಶ್ರೀಮತಿ ವಿಜಯ, ರಘುನಾಥ, ಸತೀಶ ನಾಯ್ಕ, ಶ್ರೀಮತಿ ಭವ್ಯ, ವೃತ್ತಿಪರ ನಿರ್ದೇಶಕರಾದ ಶ್ರೀಮತಿ ಪುಷ್ಪಾಲಾತ.ಕೆ, ಕೇಶವ ಎಂ.ಕೆ, ಡಿ.ಸಿ.ಸಿ ಬ್ಯಾಂಕಿನ ಪ್ರತಿನಿಧಿ ಸುದರ್ಶನ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ಶ್ರೀಮತಿ ಅನಿತಾ, ರವರ ಪ್ರಾರ್ಥನೆಯೊಂದಿಗೆ ಪ್ರಾರ೦ಭವಾದ ಕಾರ್ಯಕ್ರಮದಲ್ಲಿ ಸ೦ಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಸ್ವಾಗತಿಸಿ, ಸಂಘದ ಸಿಬ್ಬಂದಿ ರಮಾನಂದ.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.

Leave a Comment

error: Content is protected !!