ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಶಿಕ್ಷಕರ ದಿನಾಚರಣೆ: ಪ್ರತಿಯೊಬ್ಬರೂ ಉನ್ನತವಾದ ಸ್ಥಾನದಲ್ಲಿ ಇರಬೇಕಾದರೆ ಮುಖ್ಯ ಕಾರಣ ಶಿಕ್ಷಕರು: ಕಿಶೋರ್ ಕುಮಾರ್

Suddi Udaya

Updated on:

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಇಂದು ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ಗೌರವಿಸಲಾಯಿತು…ಸಭಾಧ್ಯಕ್ಷತೆಯನ್ನು ಲಯನ್ಸ್ ದೇವದಾಸ್ ಶೆಟ್ಟಿ ಹಿಬರೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ ವಹಿಸಿದ್ದರು.

ಲಯನ್ಸ್ ಉಮೇಶ್ ಶೆಟ್ಟಿ ಮತ್ತು ಲಯನ್ ಅಮಿತಾನಂದ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ್ ಗೌಡ ವಿಟ್ಲ , ಮಂಜುನಾಥ್ ಜಿ, ಮೋಹನ್ ಬಾಬು, ಕರಿಯಪ್ಪ ಇವರನ್ನು ಗೌರವಿಸಲಾಯಿತು.

ಸನ್ಮಾನಿತರ ಪರಿಚಯವನ್ನು ಲಯನ್ಸ್ ಪುಷ್ಪಾವತಿ ಎನ್ ನಾವರ, ಲಯನ್ಸ್ ಶುಭಾಷಿಣಿ, ಲಯನ್ಸ್ ಸುಂದರಿ ನಾಣ್ಯಪ್ಪ , ಲಯನ್ಸ್ ದೀಪ ಕಿರಣ್ ವಾಚಿಸಿದರು.

ಲಯನ್ಸ್ ವಸಂತ್ ಶೆಟ್ಟಿ, ಶ್ರದ್ಧಾ ವೇದಿಕೆ ಆಹ್ವಾನ ನೆರೆವೇರಿಸಿ ಲಯನ್ಸ್ ಧರಣೇಂದ್ರ ಕೆ ಜೈನ್ ಸಭಾ ಕಾರ್ಯಕ್ರಮ ನಿರ್ವಹಿಸಿದರು.. ಕಾರ್ಯದರ್ಶಿ ಲಯನ್ ಕಿರಣ್ ಕುಮಾರ್ ಶೆಟ್ಟಿ ಧನ್ಯವಾದ ಕೋರಿದರು.

Leave a Comment

error: Content is protected !!