ಕಾಶಿಪಟ್ನ: ಸಮೀಪದ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ, ಕಾರಣ ಪೋಲೀಸ್ ತನಿಖೆಯಿಂದ ತಿಳಿಯಬೇಕಷ್ಠೆ.

Suddi Udaya

ಕಾಶಿಪಟ್ಟ: ಕಾಶಿಪಟ್ಟ ಗ್ರಾಮದ ಉರ್ದು ಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ(63 ವ) ಮತ್ತು ಅವರ ಪತ್ನಿ ಬೇಬಿ (46 ವ) ರವರು ಮನೆಯ ಸಮೀಪದ ಕಾಡಿನಲ್ಲಿ ಇಂದು(ಸೆ.19ರಂದು) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ನೋಣಯ್ಯ ಪೂಜಾರಿಯವರು ಕಳೆದ 5 ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು ಹಾಗೂ ಪತ್ನಿ ಬೇಬಿಯವರು ಮಕ್ಕಳಿಲ್ಲದ ಕೊರಗಿನಲ್ಲಿದ್ದರು.ನೋಣಯ್ಯ ಪೂಜಾರಿಯವರ ಮೊದಲ ಪತ್ನಿ ಕಳೆದ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದರು. ಬಳಿಕ ಬೇಬಿಯವರನ್ನು ವಿವಾಹವಾಗಿದ್ದರು.

ಮೊದಲನೆ ಪತ್ನಿಗೆ ಐದು ಗಂಡು, ಒಂದು ಹೆಣ್ಣು ಮಕ್ಕಳಿದ್ದರು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!