September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಧರ್ಮಸ್ಥಳ: ಅಶೋಕನಗರ ನಿವಾಸಿ ನಾಟಿ ವೈದ್ಯೆ, ಶತಾಯುಷಿ ಶ್ರೀಮತಿ ನೊಕ್ಕೆ ನಿಧನ

ಧರ್ಮಸ್ಥಳ :ಇಲ್ಲಿಯ ಅಶೋಕನಗರದ ಹಿರಿಯ ಜೀವ
ನಾಟಿ ವೈದ್ಯರೆಂದೇ ಪ್ರಸಿದ್ಧರಾದ,ಐದನೇಯ ತಲೆಮಾರಾದ ಶತಾಯುಷಿ 110 ವರ್ಷ ವಯಸ್ಸಿನ ಶ್ರೀಮತಿ ನೊಕ್ಕೆ ಅಜ್ಜಿ ರವರು ವಯೋಸಹಜವಾಗಿ ಸೆ. 19ರಂದು ಸಂಜೆ ದೈವಾಧೀನರಾದರು.

ಮೃತರು ಮಕ್ಕಳು, ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

ಅವರು ತಮ್ಮ ಜೀವಿತಾವಧಿಯಲ್ಲಿ ಸುಮಾರು 700 ಕ್ಕೂ ಅಧಿಕ ಹೆರಿಗೆಗಳನ್ನು ಸುಸೂತ್ರವಾಗಿ ನೆರವೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಸುತ್ತಮುತ್ತಲ ಪರಿಸರದವರಿಗೆ ಸಣ್ಣಪುಟ್ಟ ಖಾಯಿಲೆಗಳಿಗೆ ನಾಟಿ ಮದ್ದು ಕೊಟ್ಟು ವಾಸಿ ಮಾಡುತಿದ್ದರು.

ತಲೆನೋವಿನ ಮದ್ದಿಗಾಗಿ ಪರವೂರಿನ ಜನರು ಕೂಡ ಇವರನ್ನು ಅರಸಿಕೊಂಡು ಬರುತ್ತಿದ್ದರು.ತಮಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಯಾವುದೇ ವೈದ್ಯರಿಗೆ ಕಡಿಮೆ ಇಲ್ಲದಂತೆ ಓರ್ವ ಪ್ರಸೂತಿ ತಜ್ಞೆಯಾಗಿ, ನಾಟಿ ವೈದ್ಯೆಯಾಗಿ ಊರಿನಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರು. ಅಲ್ಲದೆ ತುಳು ಸಂಧಿ – ಪಾಡ್ದನ ಹಾಡುವುದರಲ್ಲೂ ಇವರು ನಿಸ್ಸೀಮರಾಗಿದ್ದರು.
ಇವರು ಈ ಸಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

Related posts

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಜೆ.ಆರ್ ಲೋಬೋ

Suddi Udaya

ತುಂಗಪ್ಪ ಬಂಗೇರ ನೇತೃತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 17 ನೇ ವರ್ಷದ ಸಾಮೂಹಿಕ ವಿವಾಹ: ಸತಿ ಪತಿಗಳಾಗಿ 7 ಜೋಡಿ ಗೃಹಾಸ್ಥಶ್ರಮಕ್ಕೆ,ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯಪ್ರಶಸ್ತಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ

Suddi Udaya

ಅರುವ ‘ನಮ ಮಾತೆರ್ಲ ಒಂಜೇ’ ಕಲಾತಂಡದಿಂದ ಆರ್ಥಿಕ ಸಹಾಯಧನ

Suddi Udaya

ಬೆಳ್ತಂಗಡಿ: ಹೈಟೆನ್ಶನ್ ಜಂಪರ್ ತುಂಡಾಗಿ ಬಿದ್ದು ಬೆಂಕಿ ಅವಘಡ

Suddi Udaya

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದ.ಕ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನ ವಿವಿಧ ಬಸದಿಗಳಿಗೆ ಭೇಟಿ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya
error: Content is protected !!