37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಾಪ್ತಿ ವಿ. ಶೆಟ್ಟಿ ಎಂಟನೇ ತರಗತಿ ಭರತನಾಟ್ಯದಲ್ಲಿ ದ್ವಿತೀಯ, ಚಾರಿತ್ರ 10ನೇ ತರಗತಿ ಗಜಲ್ ಪ್ರಥಮ, ಭಾರ್ಗವಿ ಮತ್ತು ತಂಡ ಜಾನಪದ ನೃತ್ಯ ದ್ವಿತೀಯ, ಸಹನಾ ಆಚಾರ್ಯ ಮತ್ತು ಬಳಗ ಕವ್ವಾಲಿ ಪ್ರಥಮ, ಬೃಂದಾ ಎಂಟನೇ ತರಗತಿ ಚಿತ್ರಕಲೆ ಪ್ರಥಮ, ಶ್ರೀ ರಕ್ಷಾ ಎಂಟನೇ ತರಗತಿ ಜಾನಪದ ಹಾಡು ದ್ವಿತೀಯ, ಶ್ರೇಯಾಸ್ ಎಸ್. ಎಂಟನೇ ತರಗತಿ ಲಘು ಸಂಗೀತ ತೃತೀಯ, ಶಾಶ್ವತ್ ಎಸ್. ಶೆಟ್ಟಿ ೯ನೇ ತರಗತಿ ಮತ್ತು ರಕ್ಷಿತ್ ಶೆಟ್ಟಿ ಎಂಟನೇ ತರಗತಿ ರಸಪ್ರಶ್ನೆ ತೃತೀಯ ಸ್ಥಾನಗಳಿಸಿರುತ್ತಾರೆ.

ಪ್ರಾಥಮಿಕ ವಿಭಾಗದಲ್ಲಿ ಇಂಗ್ಲಿಷ್ ಕಂಠಪಾಠ-ನಿಧಿಶಾ ಪ್ರಥಮ, ಹಿಂದಿ ಕಂಠಪಾಠ-ಪ್ರಸ್ತುತಿ ಪ್ರಥಮ, ಭಕ್ತಿಗೀತೆ-ಜನೇಶ್ ಜೆ.ಎಂ. ಪ್ರಥಮ, ಕಥೆ ಹೇಳುವುದು-ದಿಶಾ ಡಿ.ಎ. ಪ್ರಥಮ, ಅಭಿನಯ ಗೀತೆ- ಅನಘ ಎ.ಜೆ. ಪ್ರಥಮ, ಚಿತ್ರಕಲೆ-ಮೋಕ್ಷ ದ್ವಿತೀಯ, ಕ್ಲೇ ಮೋಡೆಲ್-ದಿಶಾ ಡಿ.ಎ. ದ್ವಿತೀಯ, ಕವನ ವಚನ- ನಿಧಿಶಾ ತೃತೀಯ, ಇಂಗ್ಲಿಷ್ ಕಂಠಪಾಠ- ಖುಷಿ ಬಂಗೇರ ಪ್ರಥಮ, ಕನ್ನಡ ಕಂಠಪಾಠ-ಆಧ್ಯಾ ಆರ್. ಪ್ರಥಮ, ದೇಶಭಕ್ತಿ ಗೀತೆ- ಆಧ್ಯಾ ಹೆಚ್ ಪ್ರಥಮ, ಚಿತ್ರಕಲೆ -ಭಾನ್ವಿ ಎಸ್ ದ್ವಿತೀಯ, ಧಾರ್ಮಿಕ ಪಠಣ ಸಂಸ್ಕೃತ-ವೇದವ್ಯಾಸ ದ್ವಿತೀಯ, ಧಾರ್ಮಿಕ ಪಠಣ ಅರಬಿಕ್ – ಹನಿಯಾ ಫಾತಿಮಾ ದ್ವಿತೀಯ, ಕಥೆ ಹೇಳುವುದು- ಆದ್ಯ ಆರ್ ದ್ವಿತೀಯ, ಅಭಿನಯ ಗೀತೆ-ನಮ್ಯ ಶೆಟ್ಟಿ ದ್ವಿತೀಯ, ಭಕ್ತಿ ಗೀತೆ- ಆದ್ಯ ಹೆಚ್ ತೃತೀಯ, ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ.ಆರ್. ರವರ ಮಾರ್ಗದರ್ಶನದಲ್ಲಿ ಶಿಕ್ಷಕ ವೃಂದದವರು ಇವರಿಗೆ ತರಬೇತಿಯನ್ನು ನೀಡಿರುತ್ತಾರೆ.

Related posts

ಬಳಂಜ ಗ್ರಾ.ಪಂ. ನಲ್ಲಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿ ಚಿರಾಯು.ಸಿ. ಕೊಕ್ಕಡ ಕರಾಟೆಯಲ್ಲಿ ರಾಜ್ಯಕ್ಕೆ ದ್ವಿತೀಯ

Suddi Udaya

ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಉಜಿರೆ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲಾಕ್ಮಿ ಕಂಪನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

Suddi Udaya

ದಾಂಡೇಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ಯಾಡಿಯ ಸಂದೇಶ್.ಎಸ್.ಜೈನ್ ಆಯ್ಕೆ

Suddi Udaya

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸಂಗಡಿ ಗ್ರಾಮ ಪಂಚಾಯತಿಗೆ ಭೇಟಿ

Suddi Udaya
error: Content is protected !!