April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ:ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: ರೂ. 123 ಕೋಟಿ ವ್ಯವಹಾರ, ರೂ. 50 ಲಕ್ಷ ಲಾಭ, ಶೇ.12 ಡಿವಿಡೆಂಡ್

ಬೆಳ್ತಂಗಡಿ: ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸೆ.23ರಂದು ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ವರದಿ ಸಾಲಿನಲ್ಲಿ ಸಂಘವು ರೂ. 123 ಕೋಟಿ ವ್ಯವಹಾರ ನಡೆಸಿ, ರೂ. 50 ಲಕ್ಷ ಲಾಭ ಗಳಿಸಿದೆ., ಶೇ.12 ಡಿವಿಡೆಂಡ್ ಘೋಷಣೆ ಮಾಡಿದರು.

ವರದಿ ಹಾಗೂ ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಕುಮಾರ್ ಮಂಡಿಸಿದರು.
ಅತೀ ಹೆಚ್ಚು ನಿತ್ಯ ನಿಧಿ ಸಂಗ್ರಹಣೆ ಮಾಡಿದ ಚರಣ್ ಕುಮಾರ್, ರಾಜೇಶ್.ಬಿ, ಪ್ರಶಾಂತ್ ಇವರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಉಷಾ ಶರತ್, ಜೆಸಿಂತಾ ಮೋನಿಸ್, ಉಮೇಶ್ ಎಂ.ಬಿ, ಸಿಬ್ಬಂದಿಗಳಾದ ಸುಷ್ಮಾ ಆರ್., ಚೈತ್ರ, ಯುವರಾಜ್, ಮನೋಜ್ ಕುಮಾರ್, ಶ್ರವಣ್ ಕುಮಾರ್ ಉಪಸ್ಥಿತರಿದ್ದರು. ಸಿಬ್ಬಂದಿ ರಮ್ಯ, ಶಾರದಾ ಮತ್ತು ಅನುಶ್ರೀ ಪ್ರಾರ್ಥನೆ ಮಾಡಿದರು.ಸಿಬ್ಬಂದಿ ಜನಿಶ್.ಜೆ ನಿರೂಪಿಸಿದರು.ಸಂಘದ ನಿರ್ದೇಶಕ ರಾಮಚಂದ್ರ ಗೌಡ ಸ್ವಾಗತಿಸಿ, ಮೋಹನ್ ಶೆಟ್ಟಿಗಾರ್ ಧನ್ಯವಾದವಿತ್ತರು.

Related posts

ಬೆಳ್ತಂಗಡಿ: ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಶ್ರೀಮತಿ ಶೈಲಜಾ ಎ.ಎನ್. ರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಗ್ರಾಮ ಪಂಚಾಯತ್ ನೌಕರರ ಶ್ರೇಯ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ ಆಯ್ಕೆ

Suddi Udaya

ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಕಿಲ್ಲೂರು ನಿವಾಸಿ ರಾಯಿ ಶ್ರೀ ನಾಗಭೂಷಣ್ ರಾವ್ ನಿಧನ

Suddi Udaya

ಉರುವಾಲು: ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya
error: Content is protected !!