ಉಜಿರೆಯಲ್ಲಿ ಸಂಕಷ್ಟಿ ಪ್ರಯುಕ್ತ ತಾಳಮದ್ದಳೆ

Suddi Udaya

ಉಜಿರೆ: ಶ್ರೀ ಮದವೂರ ವಿಘ್ನೇಶ ಕಲಾಸಂಘ, ಗೇರುಕಟ್ಟೆ , ಬೆಳ್ತಂಗಡಿ, ಇವರ ಸದಸ್ಯರಿಂದ ಉಜಿರೆಯ ಈ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಿಯ ಪ್ರಯುಕ್ತ ” ಶರಸೇತು ಬಂಧನ ” ಎಂಬ ತಾಳಮದ್ದಳೆಯು ನಡೆಯಿತು. ಹಿಮ್ಮೇಳದಲ್ಲಿ ಕುಮಾರಿ ನಂದನ ಮಾಲೆಂಕಿ , ಕಾರ್ತಿಕ್ ಬಳ್ಳ ಮಂಜ, ರತನ್ ಗುಡಿಗಾರ್, ಆದಿತ್ಯ ಹೊಳ್ಳ ಭಾಗವಹಿಸಿದ್ದರು.


ಮುಮ್ಮೇಳದಲ್ಲಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಬಾಸಮೆ ನಾರಾಯಣ ಭಟ್, ಶ್ರೀರಾಮಕೃಷ್ಣ ಭಟ್ ಬಳಂಜ, ಶ್ರೀಮತಿ ಕೆ .ಆರ್. ಸುವರ್ಣ ಕುಮಾರಿ ಪಾಲ್ಗೊಂಡರು. ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವಟ್ನಾಯ , ಕಲಾವಿದರಾದ ಶ್ರೀ ಮೋಹನ ಬೈಪಾಡಿತ್ತಾಯ, ಕೊಯ್ಯೂರು ಅಶೋಕ ಭಾಂಗಿಣ್ಣಾಯ, ಡಾ. ಪ್ರಸನ್ನಕುಮಾರ್ ಐತಾಳ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಕಲಾವಿದರಿಗೆ ಶಾಲು ಹೊಂದಿಸಿ ಗೌರವಿಸಿದರು.

Leave a Comment

error: Content is protected !!