ಕರಳು ಬೇನೆ /ಕಾಲರಾ ಬಗ್ಗೆ ಎಚ್ಚರ ವಹಿಸುವಂತೆ ಬೆಳ್ತಂಗಡಿ ತಾ.ಪಂ. ನಿಂದ ಸಾರ್ವಜನಿಕರಲ್ಲಿ ವಿನಂತಿ

Suddi Udaya

ಬೆಳ್ತಂಗಡಿ: ಬೇಸಿಗೆ ಮತ್ತು ಮಳೆಗಾಲದ ಅವಧಿಯಲ್ಲಿ ಕರುಳು ಬೇನೆ/ಕಾಲರಾ ಪ್ರಕರಣಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಈ ಕೆಳಕಂಡ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ವಿನಂತಿಸಲಾಗಿದೆ.

-ಕುಡಿಯಲು ಶುದ್ಧವಾದ ನೀರನ್ನು ಉಪಯೋಗಿಸಬೇಕು. ಅಂದರೆ ನಳ್ಳಿ ಬೋರ್‌ವೆಲ್‌ಗಳು ಕ್ರಿಮಿನಾಶಕ ಸಿಂಪಡಿಸಿದ ನೀರನ್ನು ಕ್ಲೋರಿನೇಟ್ ಮಾಡಿ ಉಪಯೋಗಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಇನ್ನೂ ಕ್ಷೇಮ
– ಮಲ ಮೂತ್ರ ವಿಸರ್ಜನೆಗೆ ಶೌಚಾಲಯ ಬಳಸತಕ್ಕದ್ದು. ಬಯಲು ಶೌಚಾಲಯವನ್ನು ಸಂಪೂರ್ಣ ತಪ್ಪಿಸತಕ್ಕದ್ದು.
– ಯಾವಾಗಲೂ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು.
– ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ತಿಂಡಿ ತಿನಿಸು, ಪಾನೀಯ ಹಾಗೂ ಕತ್ತರಿಸಿದ ಹಣ್ಣು ಹಂಪಲುಗಳನ್ನು ತಿನ್ನಬಾರದು.
– ಬೀದಿಯಲ್ಲಿ ಮರಾಟ ಮಾಡುವ ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್‌ಗಳನ್ನು ಮಕ್ಕಳಿಗೆ ಕೊಡಿಸಬಾರದು.
– ಧೂಳು ಮತ್ತು ನೊಣಗಳಿಂದ ರಕ್ಷಿಸಲು ಎಲ್ಲಾ ಆಹಾರ ಮತ್ತು ಕುಡಿಯುವ ನೀರನ್ನು ಮುಚ್ಚಿಡುವುದು. ಹಣ್ಣು ಹಂಪಲು ಉಪಯೋಗಿಸುವ ಮುನ್ನ ತೊಳಿಯುವುದು. ಆಹಾರ ಪದಾರ್ಥಗಳು ಕೆಡುವ ಮುನ್ನ ವಿಲೇವಾರಿ ಮಾಡತಕ್ಕದ್ದು.
– ಕಾಲರಾ/ಕರುಳುಬೇನೆ/ಅತಿಸಾರ ಭೇದಿ ಕಂಡು ಬಂದಲ್ಲಿ ರೋಗಿಗೆ ಹೆಚ್ಚು ದ್ರವರೂಪದ ಆಹಾರ ಪದಾರ್ಥಗಳಾದ ಗಂಜಿ ನೀರು, ಹಾಲು, ಎಳನೀರು ಹಾಗೂ ಆರೋಗ್ಯ ಕಾರ್ಯಕರ್ತರಲ್ಲಿ ದೊರೆಯುವ ಪುನರ್ಜಲೀಕರಣ ದ್ರಾವಣಗಳನ್ನು ನೀಡುತ್ತಾ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು.
– ಕರುಳು ಬೇನೆ/ಕಾಲರಾ ವಿರುದ್ಧ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಚಿಕಿತ್ಸೆಯನ್ನು ಪಡೆಯುವುದು.
– ಹೋಟೇಲು, ಕ್ಯಾಂಟಿನ್ ಇತ್ಯಾದಿಗಳಲ್ಲಿ ಕುಡಿಯಲು ಬಿಸಿನೀರು ಹಾಗೂ ಬಿಸಿ ಆಹಾರವನ್ನು ಕೇಳಿ ಪಡೆಯುವುದು.
– ತಮ್ಮ ಸುತ್ತಮುತ್ತಲಿನ ಪರಿಸರ ನೈರ್ಮಲ್ಯವನ್ನು ಕಾಪಾಡುವುದು.

ಈ ಬಗ್ಗೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!