ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಾರದೋತ್ಸವ ಅಂಗವಾಗಿ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ನಡೆಯುವ ವೈಭವದ ಶಾರದೋತ್ಸವ ಕಾರ್ಯಕ್ರಮದ ಅಂಗವಾಗಿ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ನಿಟ್ಟಡ್ಕ ಕ್ರೀಡಾಂಗಣದಲ್ಲಿ ಸೆ. 29 ರಂದು ನಡೆಯಿತು.

ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ನಿವೃತ ಯೋಧ ಮೋಹನ್ ಬಿ.ಕೆ ನೇರವೇರಿಸಿ ಶಾರದೋತ್ಸವ ಹಾಗೂ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಎಲ್ಲರನ್ನು ಸ್ವಾಗತಿಸಿ,ಕಾರ್ಯಕ್ರಮದ ಯಶಸ್ವಿಗೆ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ಉದ್ಯಮಿ ಗೀರೀಶ್ ಬಂಗೇರ ನಿಟ್ಟಡ್ಕ,ನಿರ್ದೇಶಕರಾದ ಪ್ರವೀಣ್ ಕುಮಾರ್ ಹೆಚ್ ಎಸ್,ಜಗದೀಶ್ ಪೂಜಾರಿ,ಯೋಗೀಶ್ ಆರ್,ರಂಜಿತ್ ಮಜಲಡ್ಡ, ವಾಲಿಬಾಲ್ ಸಂಚಾಲಕ ರಕ್ಷಿತ್ ಬಗ್ಯೋಟ್ಟು ಹಾಗೂ ಯೋಗೀಶ್ ಕೊಂಗುಳ,ದೀಪಕ್ ಹೆಚ್.ಡಿ,ಸದಾನಂದ ಸಾಲಿಯಾನ್ ಬಳಂಜ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ ವಂದಿಸಿದರು.

Leave a Comment

error: Content is protected !!