ನೀರಿಗೆ ಇಳಿದಿದ್ದ ವೃದ್ದೆಯೋರ್ವರ ಶವ ಬೆಳಾಲು ಗ್ರಾಮದ ಅವೇಕೆ ಎಂಬಲ್ಲಿ ಪತ್ತೆ

Suddi Udaya

ಧರ್ಮಸ್ಥಳ : ಮೊಬೈಲ್ ಹಾಗೂ ಊರುಗೋಲನ್ನು ನದಿಯ ದಡದಲ್ಲಿಟ್ಟು ಸೆ. 21ರಂದು ಸಂಜೆ ನೀರಿಗೆ ಇಳಿದಿದ್ದ ವೃದ್ದೆಯೋರ್ವರು ನಂತರ ನೀರಿನಲ್ಲಿ ಕಣ್ಮರೆಯಾಗಿದ್ದರು.

ಮೊಬೈಲ್ ಹಾಗೂ ಊರುಗೋಲನ್ನು ಪೊಲೀಸ್ ಸ್ಟೇಷನ್ ತಂದಿದ್ದರೂ, ಮೊಬೈಲ್ ಒದ್ದೆಯಾಗಿದ್ದರಿಂದ ಕೂಡಲೇ ಕುಟುಂಬಸ್ಥರನ್ನು ಸಂಪರ್ಕಿಸಲು ಅಸಾಧ್ಯವಾಗಿದ್ದು ನಂತರ ಪರಿಶೀಲಿಸಿ ಕುಟುಂಬದವರನ್ನು ಸಂಪರ್ಕಿಸಿದಾಗ ಬೆಂಗಳೂರು ರಾಜಾಜಿನಗರದ ರಾಜೇಶ್ವರಮ್ಮ (83ವ.)ಎಂದು ತಿಳಿದುಬಂದಿದ್ದು, ನಂತರ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನೇತ್ರಾವತಿ ನದಿಯುದ್ಧಕ್ಕೂ ಹುಡುಕಾಡಿದಾಗ ಬೆಳಾಲು ಗ್ರಾಮದ ಅವೇಕೆ ಎಂಬಲ್ಲಿ ಮರದ ಗೆಲ್ಲಿಗೆ ಕಾಲು ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಸೆ. 30ರಂದು ಮಧ್ಯಾಹ್ನ ಕಂಡುಬಂದಿತ್ತು.

Leave a Comment

error: Content is protected !!