July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಟಿನಿ ಎಸ್.ಬಿ.ಎಸ್ ಚುನಾವಣೆ: ಅಧ್ಯಕ್ಷರಾಗಿ ಮುಹಮ್ಮದ್ ಉವೈಸ್ ಆಯ್ಕೆ

ಉಜಿರೆ: ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಕುಂಟಿನಿ ವಿಧ್ಯಾರ್ಥಿಗಳ ಸಂಘಟನೆ ಯಾದ ಎಸ್.ಬಿ.ಎಸ್(ಸುನ್ನೀ ಬಾಲ ಸಂಘ) ಇದರ ನಾಯಕತ್ವ ಚುನಾವಣೆ ಯೂ ಇತ್ತೀಚೆಗೆ ಅಲ್ ಬುಖಾರಿ ಮಸ್ಜಿದ್ ಆಡಳಿತ ಸಮೀತಿ ಅಧ್ಯಕ್ಷ ಹುಸೈನ್ ತಂಗಳ್ ನೇತ್ರತ್ವದಲ್ಲಿ ನಡೆಯಿತು.

ಮುಖ್ಯ ಗುರುಗಳಾದ ಉಮರುಲ್ ಫಾರೂಖ್ ಸಅದಿ ಸ್ವಾಗತಿಸಿ ಚುನಾವಣಾ ಮಾಹಿತಿಯನ್ನು ವಿಧ್ಯಾರ್ಥಿ ಗಳೊಂದಿಗೆ ನೀಡಿದರು. ಅಧ್ಯಾಪಕರು ಹಾಗೂ ಆಡಳಿತ ಸಮಿತಿಯ ನಾಯಕರು, ಯಂಗ್ ಮೆನ್ಸ್ ಸದಸ್ಯರು ಚುನಾವಣಾ ಯಶಸ್ವಿಯಾಗಿ ಸಹಕರಿದರು‌. ಪ್ರಸ್ತುತ ಚುನಾವಣೆಯಲ್ಲಿ 7 ವಿಧ್ಯಾರ್ಥಿಗಳು ಸ್ಪರ್ಧಿಸಿದರು. ಮುಹಮ್ಮದ್ ಉವೈಸ್ ಖಲಂದರ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಪ್ರ.ಕಾರ್ಯದರ್ಶಿ ಯಾಗಿ ಮುಹಮ್ಮದ್ ಮಿಸ್ರಾಫ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಶಹೀಂ ಅಲಿ ಸೈಟ್ ಆಯ್ಕೆಯಾದರು.

ಅಲ್ ಬುಖಾರಿ ಪ್ರ.ಕಾರ್ಯದರ್ಶಿ ಸುಲೈಮಾನ್ ಬದ್ರಿಯಾ ಮುಖ್ಯ ಚುನಾವಣಾ ವೀಕ್ಷಕರಾಗಿ ಸಹಕರಿಸಿದರು. ಖತೀಬರಾದ ಅಬ್ದುಲ್ ಖಾದರ್ ಹಿಕಮಿ ಸಂದೇಶ ಭಾಷಣ ಮಾಡಿದರು.ಸಭೆಯಲ್ಲಿ ಕತ್ತರ್ ಮುಹಮ್ಮದ್ ಹಾಜಿ, ಮೊಯ್ದೀನ್ ಕುಕ್, ಹನೀಫ್ ಡ್ರೈವರ್ ಕುಂಟಿನಿ, ಮುಹಿಯುದ್ದೀನ್ ನಜಾತ್,ರಝಾಖ್ ಕುಂಟಿನಿ, ಸಿದ್ದೀಖ್ ವಾಫಿರ್,ಸಿಕಂದರ್ ಕಲ್ಯಾಣಪುರ,ಅಬೂಬಕ್ಕರ್ ಪಂಡಿತ್, ಮುಹಮ್ಮದ್ ಅಲಿ ಉಜಿರೆ, ಶಂಶುದ್ದೀನ್ ನಾಡ್ಜೆ, ರಫೀಖ್ ಕುಂಟಿನಿ, ಅಶ್ರಫ್ ಮೇಸ್ತ್ರಿ ಯೂಸುಫ್ ಹಲೇಜಿ ಸಹಿತ ಜಮಾಅತ್ತ್ ನಾಯಕರು ಉಪಸ್ಥಿತರಿದ್ದರು.ಅಧ್ಯಾಪಕರಾದ ಹಬೀಬುರ್ರಹ್ಮಾನ್ ಜೌಹರಿ ಗೋಳಿಯಂಗಡಿ ಚುನಾವಣಾ ಫಲಿತಾಂಶ ವನ್ನು ಘೋಷಿಸಿದರು. ಹಸೈನಾರ್ ಉಸ್ತಾದ್ ಕಕ್ಕಿಂಜೆ ಧನ್ಯವಾದವಿತ್ತರು.

Related posts

ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ ಫಲಾನುಭವಿಗಳಲ್ಲಿ ಕರ್ನಾಟಕ ಮುಂಚೂಣಿ : ಕೇಂದ್ರ ಸರ್ಕಾರದಿಂದ ಎಸ್‌ಸಿ-ಎಸ್‌ಟಿ, ಮಹಿಳೆಯರಿಗೆ 2,946 ಕೋಟಿ ಸಾಲ; ಸಂಸದ ಕ್ಯಾ. ಚೌಟ ಶ್ಲಾಘನೆ

Suddi Udaya

ಸವಣಾಲು: ಗುತ್ತಿನಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡನಾಟಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಕ್ಷೇತ್ರದಿಂದ ಅಯೋಧ್ಯೆಗೆ ಬೆಳ್ಳಿಯ ಪೂಜಾ ಪರಿಕರ ಸಮರ್ಪಣೆ

Suddi Udaya

ಏ.15-25: ಕರಾಯ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಿ ಕೊಡುವುದಾಗಿ ನಂಬಿಸಿ, ರೂ. 4.95 ಲಕ್ಷ ವಂಚನೆ ಆರೋಪ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕುತ್ಲೂರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!