September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಂದು ಲಾಯಿಲ ಹಾಗೂ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಲಾಯಿಲ : ಇತ್ತೀಚಿಗೆ ನಿಧನರಾದ ಕಾಂಗ್ರೆಸ್ಸಿನ ಮುಖಂಡರು, ತಾಲೂಕು ಪಂಚಾಯತಿನ ಉಪಾಧ್ಯಕ್ಷರು, ದಲಿತ ಸಮುದಾಯದ ನಾಯಕರಾದ ಚಂದು ಲಾಯಿಲ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳು ಶಿಸ್ತಿನ ಸೈನಿಕ ಮತ್ತು ಮಾಜಿ ಸಚಿವರಾದ ಕೆ. ಗಂಗಾಧರ ಗೌಡರ ಅಭಿಮಾನಿಗಳಲ್ಲೊಬ್ಬರಾದ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಸೆ. 30 ರಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರ ಕಚೇರಿ ಬೆಳ್ತಂಗಡಿ ಇಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅರ್ಪಿಸಲಾಯಿತು.


ಸಭೆಯಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಮತ್ತು ಮಾಜಿ ಸಚಿವ ಕೆ. ಗಂಗಾಧರ ಗೌಡರು ಶ್ರದ್ಧಾಂಜಲಿ ಅರ್ಪಿಸಿ, ಬಿ. ರಾಮಣ್ಣ ಶೆಟ್ಟಿ ಅವರು ಪಕ್ಷದ ಸೈನಿಕ ಕಾರ್ಯಕರ್ತರಾಗಿದ್ದು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಒಡನಾಟದಲ್ಲಿದ್ದು, ಜನಸೇವೆ ಮಾಡಿದ ಮಹಾನಾಯಕ ಎಂದು ಹಾಗೂ ಚಂದು ಲಾಯಿಲ ಬೆಳ್ತಂಗಡಿ ತಾಲೂಕಿನ ಉಪಾಧ್ಯಕ್ಷರಾಗಿ ಬಹಳಷ್ಟು ಸಮಾಜ ಸೇವೆ ಮಾಡಿ, ತನ್ನ ಅಪಾರ ಅಭಿಮಾನಿ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಬಹು ಮುಖ್ಯ ಪಾತ್ರವಹಿಸುವವರಾಗಿರುತ್ತಾರೆ. ಇವರುಗಳ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ. ರಾಜಶೇಖರ್ ಅಜ್ರಿ, ಪ್ರಭಾಕರ ನಲ್ಕೆ, ಮೋಹನ್ ಗೌಡ ಕಲ್ಮಂಜ ಇವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.


ಈ ಸಭೆಯಲ್ಲಿ ಯು.ಎ. ಹಮೀದ್ ಉಜಿರೆ, ಅಬ್ದುಲ್ ರಹಿಮಾನ್ ಪಡ್ಪು, ಕೆ. ಆನಂದ ಶೆಟ್ಟಿ, ಜಗದೀಶ್, ಬಿ. ಮೆಹಬೂಬ್, ಕೆ. ಎಸ್. ಅಬ್ದುಲ್ಲಾ, ರಮೇಶ್ ರೆಂಕೆದಗುತ್ತು, ಸತ್ತಾರ್ ಸಾಹೇಬ್, ಅಗಸ್ಟಿನ್ ನಡ, ಕೆ. ಬಾಲಕೃಷ್ಣ ಗೌಡ, ಗುರುಪ್ರಸಾದ್ ಮಾಲಾಡಿ, ಕೃಷ್ಣ ಶೆಟ್ಟಿ ಮಾಲಾಡಿ, ಸಮದ್ ಬೆಳ್ತಂಗಡಿ, ನವೀನ್ ಪ್ರಸಾದ್ ಗೌಡ, ರಮೀಝ್ ರಾಝ ಬೆಳ್ತಂಗಡಿ, ನಿಖಿಲ್ ಬಿ. ಗೌಡ, ವೆಂಕಣ್ಣ ಲಾಯಿಲ, ಅಣ್ಣು ಲಾಯಿಲ, ಲಕ್ಷ್ಮಣ ಫಂಡಿಜೆ ಉಪಸ್ಥಿತರಿದ್ದರು. ಮೋಹನ್ ಗೌಡ ಕಲ್ಮಂಜ ಸ್ವಾಗತಿಸಿ, ವಂದಿಸಿದರು.

Related posts

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಸಂಯೋಜಿತ ಸಂಘವಾಗಿ ಕನ್ಯಾಡಿ ರಿಕ್ಷಾ ಪಾರ್ಕ್ ಸೇರ್ಪಡೆ

Suddi Udaya

ನದಿಗೆ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

Suddi Udaya

ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದ ಸಮಿತಿ ರಚನೆ

Suddi Udaya

ಕೋಳಿ ಅಂಕ ಅಪರಾಧವಾಗಿದ್ದು ಕಾನೂನು ಪಾಲಿಸುವಂತೆ ಪೊಲೀಸರಿಗೆ ಡೈರೆಕ್ಟರ್ ಜನರಲ್ ಆದೇಶ

Suddi Udaya

ಶೈಕ್ಷಣಿಕ ಕ್ಷೇತ್ರದ ಅದ್ಭುತ ಸಾಧಕ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ”ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ” ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ: ಗೌರವ ಅಧ್ಯಕ್ಷರಾಗಿ ಮನೋಹರ ಪ್ರಸಾದ್, ಜಿಲ್ಲಾ ಅಧ್ಯಕ್ಷರಾಗಿ ಇಸ್ಮಾಯಿಲ್ ಬಂಗಾಡಿ

Suddi Udaya
error: Content is protected !!