25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಂದು ಲಾಯಿಲ ಹಾಗೂ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಲಾಯಿಲ : ಇತ್ತೀಚಿಗೆ ನಿಧನರಾದ ಕಾಂಗ್ರೆಸ್ಸಿನ ಮುಖಂಡರು, ತಾಲೂಕು ಪಂಚಾಯತಿನ ಉಪಾಧ್ಯಕ್ಷರು, ದಲಿತ ಸಮುದಾಯದ ನಾಯಕರಾದ ಚಂದು ಲಾಯಿಲ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳು ಶಿಸ್ತಿನ ಸೈನಿಕ ಮತ್ತು ಮಾಜಿ ಸಚಿವರಾದ ಕೆ. ಗಂಗಾಧರ ಗೌಡರ ಅಭಿಮಾನಿಗಳಲ್ಲೊಬ್ಬರಾದ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಸೆ. 30 ರಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರ ಕಚೇರಿ ಬೆಳ್ತಂಗಡಿ ಇಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅರ್ಪಿಸಲಾಯಿತು.


ಸಭೆಯಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಮತ್ತು ಮಾಜಿ ಸಚಿವ ಕೆ. ಗಂಗಾಧರ ಗೌಡರು ಶ್ರದ್ಧಾಂಜಲಿ ಅರ್ಪಿಸಿ, ಬಿ. ರಾಮಣ್ಣ ಶೆಟ್ಟಿ ಅವರು ಪಕ್ಷದ ಸೈನಿಕ ಕಾರ್ಯಕರ್ತರಾಗಿದ್ದು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಒಡನಾಟದಲ್ಲಿದ್ದು, ಜನಸೇವೆ ಮಾಡಿದ ಮಹಾನಾಯಕ ಎಂದು ಹಾಗೂ ಚಂದು ಲಾಯಿಲ ಬೆಳ್ತಂಗಡಿ ತಾಲೂಕಿನ ಉಪಾಧ್ಯಕ್ಷರಾಗಿ ಬಹಳಷ್ಟು ಸಮಾಜ ಸೇವೆ ಮಾಡಿ, ತನ್ನ ಅಪಾರ ಅಭಿಮಾನಿ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಬಹು ಮುಖ್ಯ ಪಾತ್ರವಹಿಸುವವರಾಗಿರುತ್ತಾರೆ. ಇವರುಗಳ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ. ರಾಜಶೇಖರ್ ಅಜ್ರಿ, ಪ್ರಭಾಕರ ನಲ್ಕೆ, ಮೋಹನ್ ಗೌಡ ಕಲ್ಮಂಜ ಇವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.


ಈ ಸಭೆಯಲ್ಲಿ ಯು.ಎ. ಹಮೀದ್ ಉಜಿರೆ, ಅಬ್ದುಲ್ ರಹಿಮಾನ್ ಪಡ್ಪು, ಕೆ. ಆನಂದ ಶೆಟ್ಟಿ, ಜಗದೀಶ್, ಬಿ. ಮೆಹಬೂಬ್, ಕೆ. ಎಸ್. ಅಬ್ದುಲ್ಲಾ, ರಮೇಶ್ ರೆಂಕೆದಗುತ್ತು, ಸತ್ತಾರ್ ಸಾಹೇಬ್, ಅಗಸ್ಟಿನ್ ನಡ, ಕೆ. ಬಾಲಕೃಷ್ಣ ಗೌಡ, ಗುರುಪ್ರಸಾದ್ ಮಾಲಾಡಿ, ಕೃಷ್ಣ ಶೆಟ್ಟಿ ಮಾಲಾಡಿ, ಸಮದ್ ಬೆಳ್ತಂಗಡಿ, ನವೀನ್ ಪ್ರಸಾದ್ ಗೌಡ, ರಮೀಝ್ ರಾಝ ಬೆಳ್ತಂಗಡಿ, ನಿಖಿಲ್ ಬಿ. ಗೌಡ, ವೆಂಕಣ್ಣ ಲಾಯಿಲ, ಅಣ್ಣು ಲಾಯಿಲ, ಲಕ್ಷ್ಮಣ ಫಂಡಿಜೆ ಉಪಸ್ಥಿತರಿದ್ದರು. ಮೋಹನ್ ಗೌಡ ಕಲ್ಮಂಜ ಸ್ವಾಗತಿಸಿ, ವಂದಿಸಿದರು.

Related posts

ಬಂದಾರು ಬೀಬಿಮಜಲುವಿನಲ್ಲಿ ಒಂಟಿಸಲಗ ದಾಳಿ: ಕೃಷಿಗೆ ಹಾನಿ

Suddi Udaya

ಉಜಿರೆ: ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಮ್.ಸಿ ರಚನೆ

Suddi Udaya

ಉಜಿರೆ ಎಸ್ ಡಿ ಎಮ್ ಕಾಲೇಜಿನಲ್ಲಿ “ಇತಿಹಾಸ ನಿರ್ಮಿಸಿದ ಇತಿಹಾಸಕಾರ” ಡಾ. ಪಾದೂರು ಗುರುರಾಜ್ ಭಟ್ ರವರ ಶತಮಾನದ ಸಂಸ್ಮರಣೆ

Suddi Udaya

ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಗೆ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿ – ಎಸ್ರ ಫೌಂಡೇಶನ್ ವತಿಯಿಂದ ಸನ್ಮಾನ

Suddi Udaya

ಗುರುವಾಯನಕೆರೆ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಪರ್ವ-2024′ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದಲ್ಲಿ ಸರ್ವ ದೈವಾರಾಧಕರಿಗೆ ಸನ್ಮಾನ: ಸಂಪತ್ ಬಿ ಸುವರ್ಣ

Suddi Udaya

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya
error: Content is protected !!