ಕೆನರಾ ಬ್ಯಾಂಕ್ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆ

Suddi Udaya

ನಿಡ್ಲೆ : ಕೆನರಾ ಬ್ಯಾಂಕ್ ನಿಡ್ಲೆ ಇವರ ವತಿಯಿಂದ ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿಯ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆಯು ಅ.1 ರಂದು ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಪರಿಸರದಲ್ಲಿ ಬ್ಯಾಂಕ್ ನ ವತಿಯಿಂದ ಗಿಡಗಳನ್ನು ನೆಡಲಾಯಿತು. ಪ್ರಥಮ ಬಹುಮಾನವನ್ನು ಸ್ವಾತಿ ಹತ್ತನೇ ತರಗತಿ ದ್ವಿತೀಯ ಬಹುಮಾನವನ್ನು ನಿಶಾಂತ್ 10ನೇ ತರಗತಿ ತೃತೀಯ ಬಹುಮಾನವನ್ನು ಮೋಕ್ಷಿತ್ ಒಂಬತ್ತನೇ ತರಗತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ಶ್ರೀನಾಥ್, ಸಿಬ್ಬಂದಿಗಳಾದ ಭಾಗ್ಯರಾವ್ ಸುಧೀರ್ ,ಚಂದ್ರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರು ಸ್ವಾಗತಿಸಿ, ಶೋಲಿ ವಂದಿಸಿದರು. ಶರತ್ ಕುಮಾರ್ ನಿರ್ವಹಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

Leave a Comment

error: Content is protected !!