ವಿಕಲಚೇತನರ ಆಧಾರ್ ಕಾಡಿನ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿರುವ 25 ವಿಕಲಚೇತನರ ಆಧಾರ್ ಕಾರ್ಡ್ ಗಳಲ್ಲಿ ತಾಂತ್ರಿಕ ದೋಷಗಳನ್ನು ಸರಿ ಪಡಿಸದೆ ಸಂಬಂದಿಸಿದ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಮಸ್ಯೆ ಆಗುತ್ತಿದ್ದ ಹಿನ್ನಲೆಯಿಂದ ಮತ್ತು ಈ ವಿಕಲಚೇತನರು ಮಲಗಿದ್ದಲ್ಲೆ ಇರುವುದರಿಂದ ಈ ಪಲಾನುಭವಿಗಳು ಆಧಾರ್ ಕೇಂದ್ರಕ್ಕೆ ಬಂದು ಆಧಾರ್ ಕಾರ್ಡ್ ನ ಸಮಸ್ಯೆ ಗಳನ್ನು ಸರಿ ಪಡಿಸಲು ಆಸಾಧ್ಯವಾಗಿರುವುದರಿಂದ ಇವರಿಗಾಗಿ ಒಂದು ತಂಡವನ್ನು ರಚನೆ ಮಾಡುವ ಮೂಲಕ ಸಂಬಂಧಿಸಿದವರ ಮನೆ ಬೇಟಿ ಮಾಡಿ ಪೂರ್ಣ ಪ್ರಮಾಣದಲ್ಲಿ ಆಧಾರ್ ನೀಡುವ ಅಭಿಯಾನ ಮಾಡುವಂತೆ ಮಾಡಲು ಬೆಳ್ತಂಡಿ ತಾಲೂಕಿನ ವಿಕಲಚೇತನರ ಮೇಲ್ವಿಚಾರಕ (ಎಂ.ಆರ್.ಡಭ್ಯೂ)ರವರಾದ ಶ್ರೀ ಜೋನ್ ಬ್ಯಾಪ್ಟಿಸ್ಟ್ ರವರು ಮಾನ್ಯ ಜಿಲ್ಲಾಧಿಕಾರಿ ಯವರಲ್ಲಿ ವಿಕಲಚೇತನರ ಆಧಾರ್ ಕಾರ್ಡ್ ಸಮಸ್ಯೆಯನ್ನು ವಿವರಿಸಿ ದಿನಾಂಕ 01.10.2024 ರಂದು ಮನವಿಯನ್ನು ನೀಡಿದರು ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ವಿ.ಆರ್.ಡಭ್ಲ್ಯೂ ರವರುಗಳಾದ ಶ್ರೀ ವಿಪುಲ್, ಗ್ರಾಮ ಪಂಚಾಯತ್, ಉಜಿರೆ ಹಾಗೂ ಚಿರಂಜೀವಿ, ಗ್ರಾಮ ಪಂಚಾಯತ್ ಕಣಿಯೂರು ಇವರಿಬ್ಬರು ಕೂಡ ಜೊತೆಯಲ್ಲಿದ್ದುಕೊಂಡು ಸಹಕರಿಸಿದರು.

Leave a Comment

error: Content is protected !!