23.5 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಸೂಪರ್ ಕ್ಯಾರಿ ಟರ್ಬೋ ವಾಹನ ದಲ್ಲಿ ಹಿಂಸಾತ್ಮಕವಾಗಿ 3 ಜಾನುವಾರುಗಳ ಅಕ್ರಮ ಸಾಗಾಟ: ವಾಹನ ಸಹಿತ ಇಬ್ಬರ ಬಂಧನ

ಬೆಳ್ತಂಗಡಿ: ಪೆರ್ಮುಡ ಕಡೆಯಿಂದ ಸೂಪರ್ ಕ್ಯಾರಿ ಟರ್ಬೋ ವಾಹನ ದಲ್ಲಿ ಹಿಂಸಾತ್ಮಕವಾಗಿ 3 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ‌ಬಂಧಿಸಿ ಜಾನುವಾರುಗಳನ್ನು ವಶಪಡಿಸಿಕೊಂಡ ಪ್ರಕರಣ ಮಾ.22ರಂದು ವರದಿಯಾಗಿದೆ.

ಇಮ್ತೀಯಾಜ್‌ (29 ವರ್ಷ) ತಂದೆ: ಹಸನಬ್ಬ, ವಾಸ: ಕೋರ್ಟ್‌ ರಸ್ತೆ , ಸಂಜಯ ನಗರ,ಬೆಳ್ತಂಗಡಿ ಕಸಬಾ ಗ್ರಾಮ ಮತ್ತು
ರಮ್ಲ @ಆಸೀಪ್‌ ( 26 ವರ್ಷ) ತಂದೆ: ಅಬ್ದುಲ್‌ ರಹಿಮಾನ್‌, ವಾಸ: ಪಾದೆ ಮನೆ, ಪಡಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು, ಬಂಧಿತ ಆರೋಪಿಗಳು.
ಘಟನೆ ವಿವರ:
ವೇಣೂರು ಪೊಲೀಸ್‌ ಠಾಣೆಯ ಎಸ್ .ಐ ಶ್ರೀ ಶೈಲ ಡಿ ಮುರುಗೋಡ್‌ ಅವರು ಮಾ.22ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ ಬೆಳಿಗ್ಗೆ ಸುಮಾರು 11:45 ಕ್ಕೆ ಬೆಳ್ತಂಗಡಿ ತಾಲೂಕು ನಾಲ್ಕೂರು ಗ್ರಾಮದ ಕುಕ್ಕನಡ್ಕ ಎಂಬಲ್ಲಿಗೆ ತಲುಪುವಾಗ ಬಳಂಜ –ಪೆರ್ಮುಡ – ವೇಣೂರು ಸಾರ್ವಜನಿಕ ರಸ್ತೆಯಲ್ಲಿ ಪೆರ್ಮುಡ ಕಡೆಯಿಂದ ಒಂದು ಸೂಪರ್ ಕ್ಯಾರಿ ಟರ್ಬೋ ವಾಹನ ನೋಂದಣಿ ಸಂಖ್ಯೆ ಕೆ ಎ 20 ಎಎ 5887 ನೇ ದನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಮಯ ಆರೋಪಿತರುಗಳು ಯಾವುದೇ ಪರವಾಣಿಗೆ ಇಲ್ಲದೇ ಅಕ್ರಮವಾಗಿ ಗೋವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ 3 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಸ್ವಾದೀನಪಡಿಸಿದ್ದಾರೆ. ಸ್ವಾಧೀನಪಡಿಸಿದ 3 ಜಾನುವಾರುಗಳ ಅಂದಾಜು ಮೌಲ್ಯ 15 ಸಾವಿರ ಹಾಗೂ ವಾಹನದಅಂದಾಜು ಮೌಲ್ಯ 2 ಲಕ್ಷ ವಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನ್ಯಾಷನಲ್ ಲೆವಲ್ ಯಕ್ಷ ನೃತ್ಯ ಸ್ಪರ್ಧೆ ಮಡಂತ್ಯಾರಿನ ಯಶಸ್ವಿನಿ ಕುಲಾಲ್ ಆಯ್ಕೆ

Suddi Udaya

ರೋಟರಿ ಕ್ಲಬ್ ವತಿಯಿಂದ ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಗೆ ಟೇಬಲ್ ಮತ್ತು ಚೇರ್ ವಿತರಣೆ

Suddi Udaya

ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕ್ಯಾಲೆಂಡರ್ ಬಿಡುಗಡೆ.

Suddi Udaya

ಮದ್ದಡ್ಕದಲ್ಲಿ ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಶಾಖೆ ಉದ್ಘಾಟನೆ

Suddi Udaya

ಉಜಿರೆ ಗ್ರಾ.ಪಂ. ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya
error: Content is protected !!