28.3 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

ನಡ: ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರವು ಅ.5ರಂದು ನಡ ಸಮಾಜ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಹಾ.ಉ.ಸ. ಸಂಘದ ಅಧ್ಯಕ್ಷ ಜರ್ನಾದನ ಗೌಡ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕೆ.ಎಮ್.ಎಫ್ ಉಪವ್ಯವಸ್ಥಾಪಕ ಸತೀಶ್ ರಾವ್, ಕೆ.ಎಮ್.ಎಫ್ ಸಹಾಯಕ ವ್ಯವಸ್ಥಾಪಕ, ಪಶು ವೈದ್ಯಾಧಿಕಾರಿ ಡಾ| ಗಣಪತಿ, ಕೆ.ಎಂ.ಎಫ್ ಕೃಷಿ ಅಧಿಕಾರಿ ಡಾ. ನಿರಂಜನ್, ಕೆ.ಎಮ್.ಎಫ್ ವಿಸ್ತರಣಾಧಿಕಾರಿಯಾದ ಯಮುನ, ಸುಚಿತ್ರಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರದೇಶಕ್ಕೆ ಹೊಂದಿಕೊಳ್ಳುವ ಹಸಿರು ಮೇವಿನ ತಳಿಗಳ ಬಗ್ಗೆ ಹಾಗೂ ಸೈಲೇಜ್ / ರಸ ಮೇವು ಉಪಯೋಗದ ಬಗ್ಗೆ ಮಾಹಿತಿ., ಜಾನುವಾರುಗಳ ಗರ್ಭಧಾರಣೆ ಸಮಸ್ಯೆಯ ಬಗ್ಗೆ, ಜಾನುವಾರುಗಳ ವಿಮೆ (ಇನ್ಶೂರೆನ್ಸ್) ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಸಂಘದ ವತಿಯಿಂದ ಹಾಲು ಹಾಕುವ ಸದಸ್ಯರ ಒಂದು ದನಕ್ಕೆ ಉಚಿತವಾಗಿ ವಿಮೆಯನ್ನು ಮಾಡಲಾಯಿತು.

ಸಂಘದಲ್ಲಿ 200ಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ಸಂಘದ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.

ಯತೀಶ್ ಗೌಡ ಕಂಗಿತ್ತೀಲು ಸ್ವಾಗತಿಸಿ, ಅಜಿತ್ ಕುಮಾರ್ ಅರಿಗ ಪ್ರಸ್ತಾವಿಕ ಮಾತನಾಡಿದರು., ಜಯಂತ್ ಗೌಡ ಧನ್ಯವಾದವಿತ್ತರು.

Related posts

ಲಾಯಿಲ: ಸ್ವ ಉದ್ಯೋಗ ಆಧಾರಿತ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಅಯೋಧ್ಯೆ ಶ್ರೀರಾಮನ ಜನ್ಮಭೂಮಿಯಿಂದ ಪವಿತ್ರ ಮಂತ್ರಾಕ್ಷತೆ ಬೆಳ್ತಂಗಡಿಗೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಂತ್ರಾಕ್ಷತೆಗೆ ಭವ್ಯ ಸ್ವಾಗತ

Suddi Udaya

ಮುಂಡಾಜೆಯ ದುಂಬೆಟ್ಟು ಪ್ರದೇಶದಲ್ಲಿ ಚಿರತೆ ಹಾವಳಿ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಮೋಹನ್ ಗೌಡ, ಉಪಾಧ್ಯಕ್ಷರಾಗಿ ಶ್ರೀಮತಿ ಲತಾ ಶೆಟ್ಟಿ ಆಯ್ಕೆ

Suddi Udaya

ಕೆಲ್ಲಗುತ್ತು ಶ್ರೀ ಸತ್ಯಸಾರಮುಪ್ಪಣ್ಯ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

Suddi Udaya

ನ.9: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಪುರಪ್ರವೇಶ

Suddi Udaya
error: Content is protected !!