ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

Suddi Udaya

ಬೆಳ್ತಂಗಡಿ : ಸರ್. ಎಮ್ ವಿಶ್ವೇಶ್ವರಯ್ಯರವರ ಹುಟ್ಟುಹಬ್ಬದ ಪ್ರಯುಕ ಇಂಜಿನಿಯರ್ಸ್ ಡೇ ಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಜೆಸಿ ಭವನದಲ್ಲಿ ನಡೆಸಲಾಯಿತು.

ನಮ್ಮ ದೇಶಕ್ಕೆ ಹಾಗೂ ರಾಜ್ಯಕ್ಕೆ ಭಾರತ ರತ್ನ ವಿಶ್ವೇಶ್ವರಯ್ಯರವರ ಕೊಡುಗೆಗಳನ್ನು ಸ್ಮರಿಸುತ್ತಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮುಖಾಂತರ ಗೌರವವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಯವರು ವಹಿಸಿದರು.

ಪೂರ್ವ ಅಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ ಲಾಯಿಲ, ಲೇಡಿ ಜೆಸಿ ಸಂಯೋಜಕರಾದ ಶೃತಿ ರಂಜಿತ್ , ಉಪಾಧ್ಯಕ್ಷರುಗಳಾದ ಹೇಮಾವತಿ ಕೆ, ಆಶಾ ಪ್ರಶಾಂತ್, ಸದಸ್ಯರುಗಳಾದ ಮಧುರಾ ರಾಘವ್, ಚಿತ್ರ ಪ್ರಭಾ, ಜೆಜೆಸಿ ಅಧ್ಯಕ್ಷರಾದ ಸಮನ್ವತ್ ಕುಮಾರ್, ದೃತಿ, ಆಕಾಶ್, ಅಕ್ಷಯ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುದೀಪ್ ಜೈನ್ ಧನ್ಯವಾದವನ್ನು ಸಲ್ಲಿಸಿದರು.

Leave a Comment

error: Content is protected !!