July 28, 2026
ಧಾರ್ಮಿಕ

ಗುರುವಾಯನಕೆರೆ ಗೆಳೆಯರ ಬಳಗ: 34ನೇ ವರ್ಷದ ಶ್ರೀ ಶಾರದ ಪೂಜೋತ್ಸವ

ಗುರುವಾಯನಕೆರೆ: ಗೆಳೆಯರ ಬಳಗ ಗುರುವಾಯನಕೆರೆ ಇದರ ವತಿಯಿಂದ ಗುರುವಾಯನಕೆರೆ ಶಾರದಾ ಮಂಟಪದಲ್ಲಿ ಅ.9 ಮತ್ತು ಅ.10ರಂದು ನಡೆಯಲಿರುವ ೩೪ನೇ ವರ್ಷದ ಶ್ರೀ ಶಾರದೋತ್ಸವ ಅ.9ರಂದು ವಿದ್ಯುಕ್ತವಾಗಿ ಆರಂಭಗೊಂಡಿತು.

ಬೆಳಿಗ್ಗೆ ಕುತ್ಯಾರು ಕೆ. ದಯಾಕರ ಭಟ್ ಪೌರೋಹಿತ್ಯದಲ್ಲಿ ಪಂಚಗವ್ಯ ಪುಣ್ಯಾಹ ಸಹಿತ ಗಣಹೋಮ, ದೇವರ ಪ್ರತಿಷ್ಠಾಪನೆ ನಡೆಯಿತು. ಶ್ರೀಮತಿ ದೀಪಾ ಶೆಣೈ ಮತ್ತು ಪ್ರಕಾಶ್ ಶೆಣೈ ಶೆಣೈ ರೆಸ್ಟೋರೆಂಟ್, ಗುರುವಾಯನಕೆರೆ ಇವರು ದೀಪ ಪ್ರಜ್ವಲನೆಯನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಯೋಗೀಶ್ ಆಚಾರ್ಯ,ಟಿ.ಆರ್ ಅಡ್ಯಾಂತಾಯ, ಸುಧಾಮಣಿ, ಗೆಳೆಯರ ಬಳಗದ ಗೌರವಾಧ್ಯಕ್ಷ ಮೋಹನ್ ಕಂಚಿಂಜೆ, ಅಧ್ಯಕ್ಷ ಕೃಷ್ಣಾನಂದ ಜಿ. ಕುಲಾಲ್, ಕಾರ್ಯದರ್ಶಿ ಮಂಜುನಾಥ ಕುಂಬ್ಳೆ,

ಜೊತೆ ಕಾರ್ಯದರ್ಶಿ ಚೈತನ್ಯ ಜಿ. ಕೋಶಾಧಿಕಾರಿ ಶರಣ್ ಕುಲಾಲ್, ಶಿವಾಜಿನಗರ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋಪಿನಾಥ ನಾಯಕ್, ಲೋಕೇಶ್ ಕೆ., ರಾಮಚಂದ್ರ ಶೆಟ್ಟಿ, ಕೃಷ್ಣಪ್ಪ ಟೈಲರ್ ವಿವೇಕಾನಂದ ಸಾಲಿಯಾನ್, ವಿಠಲ ಆಚಾರ್ಯ, ಮೋಹನ ಬಿ. ರಕ್ಷಿತ್ ಶೆಣೈ, ಆನಂದ ಕೋಟ್ಯಾನ್, ಸುಂದರ ನಾಯ್ಕ, ಶೀನ ದಡ್ಡಲೆ, ಲೋಕೇಶ್ ಜಿ, ದಾಮೋದರ ಕೆ., ಕಾರ್ತಿಕ್ ನಾಯಕ್, ಸೇವಾದಾರರಾದ ಶ್ರೀಮತಿ ಶಶಿಕಲಾ ಎನ್. ಕಾಮತ್ ಮತ್ತು ಮನೆಯವರು ಉಪಸ್ಥಿತರಿದ್ದರು.
ಬಳಿಕ ಶ್ರೀ ಶಾರದಾಂಭ ಭಜನಾ ಮಂಡಳಿ ಶಾರದಾನಗರ, ಗುರುವಾಯನಕೆರೆ ಇವರಿಂದ ಭಜನಾ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ

ಸಂಜೆ ಭಗವಾನ್ ಶಿರ್ಡಿಸಾಯಿ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ, ಹಳೆಕೋಟೆ, ಬೆಳ್ತಂಗಡಿ ಇವರ ಸೇವೆ ಸಂಜೆ ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ

ಕಾರ್ಯಕ್ರಮ ಜರುಗಿತು. ರಾತ್ರಿ ದೇವಿ ಕಿರಣ್ ಕಲಾ ನಿಕೇತನ ಗುರುವಾಯನಕೆರೆ ವಿದುಷಿ ಸ್ವಾತಿ ಜಯರಾಂ ಮತ್ತು ವಿದುಷಿ ಪೃಥ್ವಿ ಸತೀಶ್ ಇವರ ಶಿಷ್ಯ ವೃಂದದವರಿಂದ ‘ನೃತ್ಯಾಪ೯ಣಂ’ ಕಾಯ೯ಕ್ರಮ ನಡೆಯಿತು.

Related posts

ನಾಗರಪಂಚಮಿ ಹಬ್ಬದ ಆಚರಣೆಯ ಮಹತ್ವ

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರಕ್ಕೆ ನೂತನ ಪಲ್ಲಕ್ಕಿ ಸಮರ್ಪಣೆ

Suddi Udaya

ಮಚ್ಚಿನ : ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಈಶ್ವರ ದೇವರ ನೂತನ ಗರ್ಭಗೃಹದ ಶಿಲಾನ್ಯಾಸ

Suddi Udaya

ಕೊಕ್ಕಡ ಶ್ರೀ ಶಿವಶಕ್ತಿ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಭಜನೋತ್ಸವ

Suddi Udaya

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಮನೆಮನೆ ಸಂಪರ್ಕ ದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya
error: Content is protected !!