24 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಮಿತ್ರಾ ವ್ಹೀಲ್ ಮಾಸ್ಟರ್ ಶುಭಾರಂಭ

ಬೆಳ್ತಂಗಡಿ: ಮಡಂತ್ಯಾರು ಪೇಟೆಯ ಮುಖ್ಯ ರಸ್ತೆಯ ಕಲಾ ಸಭಾಂಗಣ ಮುಂಭಾಗದಲ್ಲಿ ಮಿತ್ರಾ ವ್ಹೀಲ್ ಮಾಸ್ಟರ್ ಶಾಪ್ ಅ.10ರಂದು ಶುಭಾರಂಭ ಗೊಂಡಿತು.

ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ. ಶ್ರೀಧರ್ ರಾವ್ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮಳಿಗೆಯನ್ನು ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ. ಹರ್ಷ ಸಂಪಿಗೆತ್ತಾಯ ಮತ್ತು ಅರ್ಚಕ ಟಿ. ವಿ. ಶ್ರೀಧರ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಫಾ.ವಂ.ಸ್ಟಾನಿ ಗೋವಿಯಾಸ್ ಮಾತನಾಡಿ ಬೆಳೆಯುತ್ತಿರುವ ಮಡಂತ್ಯಾರು ಪಟ್ಟಣಕ್ಕೆ ಇಂತಹ ಉದ್ಯಮ ಬಹಳ ಮುಖ್ಯ ಈ ಉದ್ಯಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಬೆಟ್ಟು, ಮಾತನಾಡಿ ಬೆಳೆಯುತ್ತಿರುವ ಮಡಂತ್ಯಾರಿಗೆ ಇದು ಹೊಸ ಸೇರ್ಪಡೆ. ಮಿತ್ರ ಸೇಲ್ಸ್ ಇದ್ದದು ಈಗ ಮಿತ್ರ ವೀಲ್ ಮಾಸ್ಟರ್ ಆಗಿ ಬಹಳ ದೊಡ್ಡದಾಗಿ ಈ ಉದ್ಯಮ ಬೆಳೆಯುತ್ತಿದೆ. ಆಟೋಮೊಬೈಲ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವ ಒಂದು ಕ್ಷೇತ್ರ ಎಂದು ಹೇಳಿ ಶುಭ ಹಾರೈಸಿದರು.

ಭಾಜಪಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಪಿಡಿಓ ನಾಗೇಶ್, ಉದ್ಯಮಿಗಳಾದ ಹೈದರ್ ಎಮ್ ಆರ್. ಸಂಜೀವ ಶೆಟ್ಟಿ ಮುಗೆರೋಡಿ. ಪದ್ಮನಾಭ ಸುವರ್ಣ, ಹಿರಿಯರಾದ ಮುತ್ತಣ್ಣ ಪೂಂಜ ಗರ್ಡಾಡಿ, ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೋಕ್ತೆಸರರಾದ ವಿಠಲ್ ಶೆಟ್ಟಿ ಮೂಡಯೂರು, ಉದ್ಯಮಿ ಯೋಗೀಶ್ ಕಡ್ತಿಲ, ಕಟ್ಟಡ ಮಾಲಕಿ ಅನಿತಾ ಕೊರೆಯ, ಪ್ರಮುಖರಾದ ಸದಾನಂದ ಪೂಜಾರಿ, ಮಾಲಕಿ ಶೋಭಾ ಗಂಗಾಧರ ಮಿತ್ರ, ಹೇಮಂತ್ ಶೆಟ್ಟಿ, ವರುಣ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿ ನಾಪತ್ತೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ: ಮುಂಡಾಜೆ ಬ್ರಿಟಿಷರ ಕಾಲದ ಹಳೆ ಸೇತುವೆ ತೆರವು ಕಾರ್ಯಾಚರಣೆ ಆರಂಭ

Suddi Udaya

ಲೋಕಸಭಾ ಚುನಾವಣಾ ನೀತಿ ಸಂಹಿತೆ: ಗ್ರಾ.ಪಂ. ನೌಕರರ ಶಾಂತಿಯುತ ಪ್ರತಿಭಟನೆ ಮುಕ್ತಾಯ: ಆ.20 ರಿಂದ ಬೆಂಗಳೂರು ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆ

Suddi Udaya

ಮುಂಡಾಜೆ: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ‌ ಬಕ್ರೀದ್ ಆಚರಣೆ-ಸಾಮೂಹಿಕ ಪ್ರಾರ್ಥನೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಸಾಂಸ್ಕೃತಿಕ ವೈಭವ “ಕ್ರೀಡಾ ಕಲರವ 2023”

Suddi Udaya

ಗೋವಾದಲ್ಲಿ ಯಕ್ಷ ಕಲರವ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

Suddi Udaya
error: Content is protected !!