ಗುರುವಾಯನಕೆರೆಯಲ್ಲಿ ದೇವು ಯು ಪಿವಿಸಿ ಇಂಟೀರಿಯರ್ ಶುಭಾರಂಭ

Suddi Udaya

Updated on:

ಗುರುವಾಯನಕೆರೆ: ನೂತನ ಸಂಸ್ಥೆಯಾದ ದೇವು ಯು ಪಿ ವಿ ಸಿ ಇಂಟೀರಿಯರ್ ಅ.12ರಂದು ಗುರುವಾಯನಕೆರೆ ಕೆಪಿಟಿಸಿಎಲ್ ಹತ್ತಿರ ಶಕ್ತಿನಗರದಲ್ಲಿ ಶುಭಾರಂಭಗೊಂಡಿತು.


ನೂತನ ಸಂಸ್ಥೆಯನ್ನು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಕಳಿಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಬಾಲಕೃಷ್ಣ ಬಿರ್ಮೊಟ್ಟು, ಉದ್ಯಮಿ ಸಂತೋಷ್ ಹೆಗ್ಡೆ, ಕಿರಣ್ ಕುಮಾರ್ ಶೆಟ್ಟಿ, ಇಂಜಿನಿಯರ್ ಪ್ರಸನ್ನ, ಉಮೇಶ್ ಮನು ಸ್ಟುಡಿಯೋ, ವಿಜಯ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್, ಗುರುವಾಯನಕೆರೆ ಸೇವಾ ಸಹಕಾರಿ ಸೊಸೈಟಿ ನಿರ್ದೇಶಕ ಶಶಿರಾಜ್ ಶೆಟ್ಟಿ, ಕುವೆಟ್ಟು ಗ್ರಾ.ಪಂ. ಸದಸ್ಯ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.


ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲೀಕರಾದ ಗಂಗಾಧರ ಆಚಾರ್ಯ ವಂದಿಸಿದರು.

ಅಂಗಡಿ, ಮನೆ, ಶೋರೂಂಗಳಿಗೆ ವುಡ್, ಪ್ರೈವುಡ್, ಯು ಪಿವಿಸಿ ಡೋರ್ & ವಿಂಡೋಸ್ ಒಳ ವಿನ್ಯಾಸ ಮಾಡಿಕೊಡಲಾಗುವುದೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Comment

error: Content is protected !!