September 6, 2026
Uncategorized

ಶಿಶಿಲ :ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

ಶಿಶಿಲ ಗ್ರಾಮದ ಕೊಳಂಬೆ ರವಿ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಯರಿಂಗ್ ಸೇರಿದಂತೆ 25,000 ಹೆಚ್ಚಿನ ನಷ್ಟ ಸಂಭವಿಸಿತು.
ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಸದಸ್ಯರು ಹಾಗೂ ಪದಾಧಿಕಾರಿಗಳು ಮನೆಯ ವಯರಿಂಗ್ ದುರಸ್ತಿಗೊಳಿಸಿಕೊಟ್ಟು ಸದಸ್ಯರು ಸಂಗ್ರಹಿಸಿದ ದೇಣಿಗೆಯನ್ನು ರವಿಯವರಿಗೆ ಹಸ್ತಾಂತರಿಸಿದರು. ಸಿಡಿಲಿಗೆ ಛಿದ್ರಗೊಂಡಿದ್ದ ಸ್ಟೆಬಿಲೈಸರ್, ರಿಸೀವರ್ ಬದಲಿಗೆ ಹೊಸ ಉಪಕರಣಗಳನ್ನು ನೀಡಲಾಯಿತು. ಅರಸಿನಮಕ್ಕಿ ಅನ್ನಾ ಎಂಟರ್ಪ್ರೈಸಸ್ ಉಚಿತವಾಗಿ ಡಿಶ್ ಕೇಬಲ್ ನೀಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರು, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

ಉಜಿರೆ: ಕೃತಿಕಾ ಹಾಗೂ ಪುಣ್ಯಶ್ರೀ ರವರ ಚಿಕಿತ್ಸೆಗಾಗಿ ನೆರವಿಗೆ ಮನವಿ

Suddi Udaya

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೊಗ್ರು ಗ್ರಾಮದ ಮುಗೇರಡ್ಕ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸದಸ್ಯರಿಗೆ 15 ಶೇ. ಡಿವಿಡೆಂಟ್

Suddi Udaya

ಕೊಕ್ಕಡ:ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ

Suddi Udaya
error: Content is protected !!