25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆರಂಬೋಡಿ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

ಆರಂಬೋಡಿ : ಇಲ್ಲಿಯ ಪಿಲಿಕಜೆಯ ನಿವಾಸಿ ಶ್ರೀಮತಿ ಮಮತಾ(45ವ) ಅವರು ಅ.13 ರಂದು ಮನೆಯಿಂದ ನಾಪತ್ತೆಯಾಗಿದ್ದು, ಅವರ ಮೃತ ದೇಹವು ಬಾವಿಯಲ್ಲಿ ಮರುದಿನ ಪತ್ತೆಯಾದ ಘಟನೆ ಅ.14 ರಂದು ನಡೆದಿದೆ.

ಘಟನೆ ವಿವರ: ಆರಂಬೋಡಿ ಗ್ರಾಮದ ಪಿಲಿಕಜೆ ನಿವಾಸಿ ಶ್ರೀಧರ ಪೂಜಾರಿ ಅವರು ಸುಮಾರು 7 ವರ್ಷಗಳ ಹಿಂದೆ ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿದ್ದು ಎಡಕೈ ಹಾಗೂ ಎಡಕಾಲಿನ ಸ್ವಾಧಿನತೆ ಕಳೆದುಕೊಂಡು ಮನೆಯಲ್ಲೆ ಇದ್ದಾರೆ. ಇವರ ಪತ್ನಿ ಶ್ರೀಮತಿ ಮಮತಾರವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ಚಿಕಿತ್ಸೆಯಲ್ಲಿ ಪಡೆಯುತ್ತಿದ್ದರು. ಅ.13 ರಂದು ಬೆಳಗಿನ ಉಪಹಾರದ ಬಳಿಕ ಶ್ರೀಮತಿ ಮಮತಾ ರವರು ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ನೆರೆ-ಹೊರೆಯವರು ಎಲ್ಲ ಕಡೆ ಹುಡುಕಾಡಿದರೂ ,ಆ ದಿನ ರಾತ್ರಿಯಾದರೂ ಪತ್ತೆಯಾಗಿಲ್ಲ , ಮರುದಿನ ಅ. 14 ರಂದು ಬೆಳಿಗ್ಗೆ ಹುಡುಕಾಡುತ್ತಿರುವ ಸಮಯ ಅವರ ಮೃತ ದೇಹವು ಮನೆಯ ಅಂಗಳದಲ್ಲಿ ಇರುವ ಕುಡಿಯುವ ನೀರಿನ ಬಾವಿಯಲ್ಲಿ ಪತ್ತೆಯಾಗಿದೆ.

ಶ್ರೀಮತಿ ಮಮತಾರವರಿಗೆ ಇದ್ದ ಮಾನಸಿಕ ಖಾಯಿಲೆಯಿಂದ ಹಾಗೂ ಅವರ ಗಂಡನಿಗೆ ಇರುವ ಪಾರ್ಶ್ವವಾಯು ಖಾಯಿಲೆಯಿಂದ ಬೇಸತ್ತು ಮಮತಾರವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಬಾವಿಗೆ ಹಾರಿದ್ದು, ಉಸಿರುಗಟ್ಟಿ ಮೃತ ಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರ ಶ್ರೀಕಾಂತ್ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಜ್ವಲ್ ಗೆ ನೀಟ್ ನಲ್ಲಿ 720ರಲ್ಲಿ 710

Suddi Udaya

ಬಳಂಜ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ : ತಳಿರು ತೋರಣದಿಂದ ಅಲಂಕಾರ, ಆರತಿ ಬೆಳಗಿ ತಿಲಕವಿಟ್ಟು, ಹೂಗುಚ್ಚ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

Suddi Udaya

ಗೇರುಕಟ್ಟೆ : ಕಾಂಗ್ರೆಸ್ ಪಕ್ಷದ ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತೀಶ್ ನಾಯ್ಕ್ ನಾಳ ಆಯ್ಕೆ. ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಭಾಗಿ

Suddi Udaya

ನಾಟಿ ವೈದ್ಯರಾದ ಬೇಬಿ ಪೂಜಾರಿ ಮತ್ತು ಕರ್ಗಿ ಶೆಟ್ಟಿಯವರಿಗೆ ‘ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ’ ಪ್ರದಾನ

Suddi Udaya

ಬೆಳ್ತಂಗಡಿ: ಪೋಲಿಯೋ ಲಸಿಕಾ ಅಭಿಯಾನ: ಶೇ 95% ಗುರಿ ಸಾಧನೆ

Suddi Udaya

ಕಾಂಗ್ರೆಸ್ ಗ್ಯಾರಂಟಿಗಳಿಗೆ ಸರಕಾರ ರಚನೆಯಾದ ಮೇಲೆ ಹೊಸ ಹೊಸ ರೂಪ: ಯೋಜನೆಗಳ ಅನುಷ್ಠಾನದ ಬಗ್ಗೆ ರಾಜ್ಯದ ಜನತೆ ಭ್ರಮನಿರಸ: ಪತ್ರಿಕಾ ಹೇಳಿಕೆಯಲ್ಲಿ ಪ್ರತಾಪಸಿಂಹ ನಾಯಕ್ ಆರೋಪ

Suddi Udaya
error: Content is protected !!