ಗುರುವಾಯನಕೆರೆ ಯರ್ಡೂರು ನಿವಾಸಿ ರಾಘವೇಂದ್ರ ಆಚಾರ್ಯ ನೈಕುಳಿ ನಿಧನ

Suddi Udaya

ಗುರುವಾಯನಕೆರೆ: ಇಲ್ಲಿಯ ಯರ್ಡೂರು ನಿವಾಸಿ ರಾಘವೇಂದ್ರ ಆಚಾರ್ಯ ನೈಕುಳಿ (50ವ) ಅವರು ಅಲ್ಪಕಾಲದ ಅನಾರೊಗ್ಯದಿಂದ ಬಳಲಿ ಅ.15 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸಮಾಜದ ಮುಖಂಡರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಸ್ವಂತವಾಗಿ ಚಿನ್ನಾಭರಣ ತಯಾರಿ ವೃತ್ತಿಯನ್ನು ಹಲವು ವರ್ಷಗಳಿಂದ ಮಾಡಿಕೊಂಡು ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ ಪವಿತ್ರ, ಪುತ್ರಿ ವೈಷ್ಣವಿ, ಪುತ್ರ ಶ್ರೀವತ್ಸ, ನಾಲ್ವರು ಸಹೋದರರು, ಆರು ಮಂದಿ ಸಹೋದರಿಯರು, ಬಂಧು ವಗ೯ದವರು, ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

error: Content is protected !!