25.5 C
ಪುತ್ತೂರು, ಬೆಳ್ತಂಗಡಿ
July 23, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ಎನ್ ಎಸ್ ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ನಾರಾವಿ: “ಪರಿಸರವನ್ನ ಸ್ವಚ್ಛಗೊಳಿಸುವುದು ಮಾತ್ರ ಎನ್ ಎಸ್ ಎಸ್ ನ ಕೆಲಸವಲ್ಲ. ಮನುಷ್ಯನ ಮಾನಸಿಕ ಕೊಳೆಯನ್ನು ತೊಡೆದು ಅರಿವನ್ನು ಮೂಡಿಸಿ ಮನೋಬಲವನ್ನು ನೀಡುವುದೇ ಎನ್ ಎಸ್ ಎಸ್. ವಿದ್ಯಾರ್ಥಿಗಳಲ್ಲಿ ತನ್ನತನವನ್ನು ಬೆಳೆಸಿ ಪ್ರೇರೇಪಿಸಿ ಸುಂದರ ವ್ಯಕ್ತಿತ್ವವನ್ನು ನೀಡುವ ಕಲೆಗಾರಿಕೆ ಇರುವ ಏಕೈಕ ಸಂಸ್ಥೆ ಯನ್ ಯಸ್ ಯಸ್ ” ಎಂದು ಶ್ರೀ ಧವಳ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು . ಅವರು ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ.ಆಲ್ವಿನ್ ಸೆರಾವೋ ಅವರು “ಎನ್ಎಸ್ಎಸ್ ನಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಭೇದಭಾವ ಇರೋದಿಲ್ಲ. ನೈತಿಕತೆ ಹಾಗೂ ಆರೋಗ್ಯ ಪೂರ್ಣ ಬದುಕು ಅವರಿಗೆ ಒಲಿಯುತ್ತದೆ” ಎಂದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ದಿನೇಶ್ ಬಿ.ಕೆ ಬಳಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ರಶ್ವಿತಾ ಧನ್ಯವಾದವಿತ್ತರು. ಸ್ವಯಂಸೇವಕಿ ಕು.ಅನ್ವಿತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ಉಪನ್ಯಾಸಕರಾದ ಅವಿಲ್ ಮೋರಸ್, ಸಂತೋಷ್ ಈದು, ಅವಿನಾಶ್ ಲೋಬೋ, ಶ್ರೀಮತಿ ಅನಿತಾ ಡಿಸೋಜಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯಿಂದ ಧನಸಹಾಯ ವಿತರಣೆ

Suddi Udaya

ಮೇಲಂತಬೆಟ್ಟು: ಕಜೆ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಡಾ. ಪ್ರಕಾಶ್ ಎಸ್ ನೇಮಕ

Suddi Udaya
error: Content is protected !!