April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ‘ಶಾಂತಿಶ್ರೀ ‘ ಜೈನ ಮಹಿಳಾ ಸಮಾಜ ವತಿಯಿಂದ ‘ಆಹಾರೋತ್ಸವ ‘ ಕಾರ್ಯಕ್ರಮ

ಬೆಳ್ತಂಗಡಿ : ‘ಶಾಂತಿಶ್ರೀ ‘ ಮಹಿಳಾ ಸಮಾಜದ ವತಿಯಿಂದ ಶ್ರೀ. ಧ. ಮಂ. ಕಲಾಭವನದ ‘ ಪಿನಾಕಿಹಾಲ್ ‘ನಲ್ಲಿ ಕಂದ ಮೂಲರಹಿತ ಆಹಾರೋತ್ಸವವನ್ನು ನಡೆಸಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಪ್ರಸನ್ನ ಆರ್. ಹೆಗ್ಡೆ ಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾದ ಭಾ. ಜೈನ್ ಮಿಲನ್ ಬೆಳ್ತಂಗಡಿ, ಇದರ ಅಧ್ಯಕ್ಷರಾದ ವೀರ್ ನವೀನ್ ಕುಮಾರ್ ಜೈನ್ ರವರು ಮನೆಗಳಲ್ಲಿ ಶುದ್ಧವಾದ ಪೌಷ್ಟಿಕಾಂಶ ಭರಿತ, ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುವಲ್ಲಿ ಅಮ್ಮಂದಿರ ಪಾತ್ರ ಹಿರಿದಾದುದು. ಜೈನ ಆಹಾರ ಪದ್ಧತಿಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿದೆ ಎಂಬುದಾಗಿ ತಿಳಿಸಿದರು. ಅಲ್ಲದೆ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಲಯ ಮಟ್ಟದ ಜಿನಭಜನೆ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.


ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರೊ | ತ್ರಿಶಲಾ ಜೈನ್.ಕೆ. ಎಸ್ ರವರು ಕಂದ ಮೂಲರಹಿತ ಆಹಾರ ಮಹತ್ವದ ಬಗ್ಗೆ ತಿಳಿಸುತ್ತಾ, ಆಹಾರದ ವಿಧಗಳಾದ ರಾಜಸ ಆಹಾರ, ತಾಮಸ ಆಹಾರ ಮತ್ತು ಸಾತ್ವಿಕ ಆಹಾರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 30 ಬಗೆಯ ವಿವಿಧ ಕಂದ ಮೂಲರಹಿತ ಖಾದ್ಯಗಳನ್ನು ತಯಾರಿಸಿ ತಂದಿರುವ ಸದಸ್ಯೆಯರನ್ನು ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈಶಾಲಿ ಬಲ್ಲಾಳ್, ಮಂಗಳೂರು, ಇವರು ಅತಿಥಿಗಳನ್ನು ಗೌರವಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಸುಷ್ಮಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿಯವರಾದ ಶ್ರೀಮತಿ ರಾಜಶ್ರೀ. ಎಸ್ ಹೆಗ್ಡೆಯವರು ಸ್ವಾಗತಿಸಿ, ಶ್ರೀಮತಿ ಅನುಪಮಾ ಡಿ ಜೈನ್ ರವರು ಸಹಕರಿಸಿದರು. ಶ್ರೀಮತಿ ಸರಿಕಾ ರವರು ವಂದಿಸಿದರು. ಶ್ರೀಮತಿ ಧವಳಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಹಾಗೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕೃತ ರವಿಚಂದ್ರ ಸಾಲಿಯಾನ್ ರವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರಕ್ಷಿತ್ ಶಿವಾರಾಂ ರವರ ಸಹೋದರಿ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಹೃದಯಾಘಾತದಿಂದ ನಿಧನ

Suddi Udaya

ಅಂಡಿಂಜೆ: ಗಾಂದೋಟ್ಯ ನಿವಾಸಿ ಲಲಿತ ನಿಧನ

Suddi Udaya

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರವಣಬೆಳಗೊಳ ಶ್ರೀ ಗಳಿಗೆ ವಿನಯಾಂಜಲಿ ಕಾರ್ಯಕ್ರಮ

Suddi Udaya

ಜು.6: ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಸೌತಡ್ಕ ದೇವಸ್ಥಾನಕ್ಕೆ ಸ್ಥಿರಾಸ್ತಿ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಸಹಾಯಕ ಆಯುಕ್ತರಿಂದ ಆದೇಶ

Suddi Udaya
error: Content is protected !!