July 23, 2026
ಧಾರ್ಮಿಕ

ನ.17: ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ ಶ್ರೀರಾಮನಾಮ ಜಪ ಮಹಾ ಅಭಿಯಾನ ನ.3 – 21: ಮಂಗಳೂರಿ ನಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಮೊಕ್ಕಂ

ಮಂಗಳೂರು, ಅ.29;ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾದ ಪರಮಪೂಜ್ಯ ಶ್ರೀಮತ್ ವಿದ್ಯಾಧೀಶ ತೀರ್ಥ ಶ್ರೀ ಪಾದ ಒಡೇರಾ ಸ್ವಾಮೀಜಿಯವರು ಮಂಗಳೂರು ರಥಬೀದಿ ಶ್ರೀ ಗೋಕರ್ಣ ಮಠದ ಶಾಖಾ ಮಠದಲ್ಲಿ ನ.3 ರಿಂದ ನ.21ರವರೆಗೆ ಮೊಕ್ಕಾಂ ಹೂಡಲಿದ್ದಾರೆ.ಈ ಹಿನ್ನೆಲೆಯಲ್ಲಿ ನ.17ರಂದು ಒಂದೇ ದಿನದಲ್ಲಿ 55ಲಕ್ಷ ಜಪ ಸಂಖ್ಯೆಯ ಗುರಿ ಹೊಂದಿರುವ ಶ್ರೀ ರಾಮನಾಮ ಜಪ ಮಹಾ ಅಭಿಯಾನ ಮಂಗಲರಾಮಃ ಕೇಂದ್ರದಲ್ಲಿ ನಡೆಯಲಿದೆ. ಎಪ್ರಿಲ್ 17 ರಂದು ಆರಂಭಿಸಲಾದ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ , ಮಂಗಲರಾಮಃ ಕೇಂದ್ರದಲ್ಲಿ ಈಗಾಗಲೇ
10.50 ಕೋಟಿ ಶ್ರೀ ರಾಮನಾಮ ಜಪ ನಡೆದಿದೆ. ನ 18,2025 ರೊಳಗೆ 25ಕೋಟಿ ಶ್ರೀ ರಾಮನಾಮ ಜಪ ತಲುಪುವ ಉದ್ದೇಶ ಹೊಂದಲಾಗಿದೆ.
ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಎರಡನೇ ಬಾರಿಯ ಈ ಐತಿಹಾಸಿಕ ಮೊಕ್ಕಾಂ ನ ಸಂದರ್ಭದಲ್ಲಿ ಸಮಾಜದ ಭಕ್ತ ಬಾಂಧವರು ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಶ್ರೀರಾಮ ವೀರ ವಿಠಲ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಹಾಗೂ ಪರಮಪೂಜ್ಯ ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಕಟಣೆ ತಿಳಿಸಿದೆ.

Related posts

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರವರು ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ, ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಕಾವು ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಶಿಶಿಲ-ಯುವ ಸಮಿತಿ, ಮಹಿಳಾ ಸಮಿತಿಯಿಂದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಸೌತಡ್ಕ ಶ್ರೀ ಮಹಾ ಗಣಪತಿ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ ಭೇಟಿ

Suddi Udaya

ಕಾಂತಾರ ಖ್ಯಾತಿಯ ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

Suddi Udaya

ಇಂದಬೆಟ್ಟು ಎಂಜೆಎಂ ಮಸೀದಿಯಲ್ಲಿ ಈದ್ ಆಚರಣೆ

Suddi Udaya
error: Content is protected !!