September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಗೀನಿಯರ ಸುವರ್ಣ ಸಂಭ್ರಮ: ಧರ್ಮಾಧ್ಯಕ್ಷರಿಂದ ಗೌರವ ಮತ್ತು ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪವಿತ್ರ ಹೃದಯ ಭಗೀನಿಯರ ಮೇರಿ ಮಾತಾ ರಿಜಿಯನ್‌ನ ನಾಲ್ವರು ಭಗೀನಿಯರ ವೃತ ಸ್ವೀಕಾರದ ಸುವರ್ಣ ಸಂಭ್ರಮ ಮತ್ತು ರಜತ ಸಂಭ್ರಮವನ್ನು ನೆಲ್ಯಾಡಿಯಲ್ಲಿ ಆಚರಿಸಲಾಯಿತು. “ಆದ್ಯಾತ್ಮ ಮತ್ತು ಸೇವೆಯ ಮೂಲಕ ಭಗೀನಿಯರು ಪ್ರಭು ಯೇಸುಕ್ರಿಸ್ತನ ಜೀವನ ಮತ್ತು ಅವರ ಬದುಕಿನ ನೇರ ಪ್ರಾತ್ಯಕ್ಷತೆ ತಮ್ಮ ಬದುಕಿನಲ್ಲಿ ಒದಗಿಸುತ್ತಿದ್ದಾರೆ,” ಎಂದು ಇವರನ್ನು ಅಭಿನಂದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.

ಸಮಾರಂಭದಲ್ಲಿ ಸಿಸ್ಟರ್ ಫಿಲೋಮಿನ ಕುರಿಯನ್ ಮತ್ತು ಸಿಸ್ಟರ್ ಆನಿ ಕುರಿಯನ್ ಸುವರ್ಣ ಸಂಭ್ರಮವನ್ನು ಹಾಗೂ ಸಿಸ್ಟರ್ ಮೇಬಿಲ್ ಜೋನ್ ಮತ್ತು ಸಿಸ್ಟರ್ ಜಿನ್ಸಿ ರೋಸ್ ರಜತ ಮಹೋತ್ಸವವನ್ನು ಆಚರಿಸಿದರು. ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಹಾಗೂ ರಿಜಿನಲ್ ಸುಪೀರಿಯರ್ ಲಿಸ್ ಮಾತ್ಯು ಶುಭ ಕೋರಿದರು. ಹೆಗ್ಗಳದ ವಂದನೀಯ ಫಾ. ರೋಷನ್ ಪುದುಶೇರಿ ಮತ್ತು ಬಜಗೋಳಿಯ ಫಾ. ತೋಮಸ್ ಪಾರೆಕಾಟ್ಟಿಲ್ ಬಲಿಪೂಜೆಯಲ್ಲಿ ಭಾಗವಹಿಸಿದರು. ವಂದನೀಯ ಸಿಸ್ಟರ್ ಎಲ್ಸಿಲಿಟ್, ಸಿಸ್ಟರ್ ಬ್ಲೆಸಿಮರಿಯ, ಸಿಸ್ಟರ್ ಆಲ್ಫಿ, ಸಿಸ್ಟರ್ ತೆರೆಸ್ ಕುರಿಯನ್, ಸಿಸ್ಟರ್ ಆಲಿಸ್, ಸಿಸ್ಟರ್ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

ನಡ ಗ್ರಾ.ಪಂ. ಉಪಾಧ್ಯಕ್ಷರಾಗಿ ಜಯ ಶೆಟ್ಟಿ ಬೊಲ್ಲೊಟ್ಟು ಅವಿರೋಧ ಆಯ್ಕೆ

Suddi Udaya

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಜ.22 ರಂದು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹನುಮಾನ್ ಚಾಲಿಸಾ ರಾಮತಾರಕ ಮಂತ್ರ ಹಾಗೂ ಭಜನಾ ಕಾರ್ಯಕ್ರಮ

Suddi Udaya

ಅಳದಂಗಡಿ: ಆಟೋ ಪಲ್ಟಿಯಾಗಿ ಚಾಲಕ ಸಾವು

Suddi Udaya

ವಿಷವಿಕ್ಕಿದ ದುರುಳರು; 10ಕ್ಕಿಂತ ಅಧಿಕ ನಾಯಿಗಳ ಸಾವು

Suddi Udaya

ಫೆಬ್ರವರಿ ತಿಂಗಳಲ್ಲಿ ತಾ.ಪಂ – ಜಿ.ಪಂ ಚುನಾವಣೆ: ಮೀಸಲಾತಿ ಪ್ರಕಟಣೆಯ ನಿರೀಕ್ಷೆ: ಆಯೋಗದ ಸಿದ್ಧತೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya
error: Content is protected !!