24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಗೀನಿಯರ ಸುವರ್ಣ ಸಂಭ್ರಮ: ಧರ್ಮಾಧ್ಯಕ್ಷರಿಂದ ಗೌರವ ಮತ್ತು ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪವಿತ್ರ ಹೃದಯ ಭಗೀನಿಯರ ಮೇರಿ ಮಾತಾ ರಿಜಿಯನ್‌ನ ನಾಲ್ವರು ಭಗೀನಿಯರ ವೃತ ಸ್ವೀಕಾರದ ಸುವರ್ಣ ಸಂಭ್ರಮ ಮತ್ತು ರಜತ ಸಂಭ್ರಮವನ್ನು ನೆಲ್ಯಾಡಿಯಲ್ಲಿ ಆಚರಿಸಲಾಯಿತು. “ಆದ್ಯಾತ್ಮ ಮತ್ತು ಸೇವೆಯ ಮೂಲಕ ಭಗೀನಿಯರು ಪ್ರಭು ಯೇಸುಕ್ರಿಸ್ತನ ಜೀವನ ಮತ್ತು ಅವರ ಬದುಕಿನ ನೇರ ಪ್ರಾತ್ಯಕ್ಷತೆ ತಮ್ಮ ಬದುಕಿನಲ್ಲಿ ಒದಗಿಸುತ್ತಿದ್ದಾರೆ,” ಎಂದು ಇವರನ್ನು ಅಭಿನಂದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.

ಸಮಾರಂಭದಲ್ಲಿ ಸಿಸ್ಟರ್ ಫಿಲೋಮಿನ ಕುರಿಯನ್ ಮತ್ತು ಸಿಸ್ಟರ್ ಆನಿ ಕುರಿಯನ್ ಸುವರ್ಣ ಸಂಭ್ರಮವನ್ನು ಹಾಗೂ ಸಿಸ್ಟರ್ ಮೇಬಿಲ್ ಜೋನ್ ಮತ್ತು ಸಿಸ್ಟರ್ ಜಿನ್ಸಿ ರೋಸ್ ರಜತ ಮಹೋತ್ಸವವನ್ನು ಆಚರಿಸಿದರು. ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಹಾಗೂ ರಿಜಿನಲ್ ಸುಪೀರಿಯರ್ ಲಿಸ್ ಮಾತ್ಯು ಶುಭ ಕೋರಿದರು. ಹೆಗ್ಗಳದ ವಂದನೀಯ ಫಾ. ರೋಷನ್ ಪುದುಶೇರಿ ಮತ್ತು ಬಜಗೋಳಿಯ ಫಾ. ತೋಮಸ್ ಪಾರೆಕಾಟ್ಟಿಲ್ ಬಲಿಪೂಜೆಯಲ್ಲಿ ಭಾಗವಹಿಸಿದರು. ವಂದನೀಯ ಸಿಸ್ಟರ್ ಎಲ್ಸಿಲಿಟ್, ಸಿಸ್ಟರ್ ಬ್ಲೆಸಿಮರಿಯ, ಸಿಸ್ಟರ್ ಆಲ್ಫಿ, ಸಿಸ್ಟರ್ ತೆರೆಸ್ ಕುರಿಯನ್, ಸಿಸ್ಟರ್ ಆಲಿಸ್, ಸಿಸ್ಟರ್ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆ: ರೂ. 27.92 ಲಕ್ಷ ನಿವ್ವಳ ಲಾಭ, ಶೇ. 8 ಡಿವಿಡೆಂಟ್

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಆಗ್ರಹ

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ

Suddi Udaya

ತೋಟತ್ತಾಡಿ: ಚಿಬಿದ್ರೆ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ನೂತನ ಪದಾಧಿಕಾರಿಗಳ ಸಮಿತಿ ರಚನೆ

Suddi Udaya

ಮೇ 1-3 : ಕುಂಡದಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ನಲ್ಲಿ 51 ನೇ ವರ್ಷದ ಮಖಾಂ ಉರೂಸ್

Suddi Udaya
error: Content is protected !!