April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಗೀನಿಯರ ಸುವರ್ಣ ಸಂಭ್ರಮ: ಧರ್ಮಾಧ್ಯಕ್ಷರಿಂದ ಗೌರವ ಮತ್ತು ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪವಿತ್ರ ಹೃದಯ ಭಗೀನಿಯರ ಮೇರಿ ಮಾತಾ ರಿಜಿಯನ್‌ನ ನಾಲ್ವರು ಭಗೀನಿಯರ ವೃತ ಸ್ವೀಕಾರದ ಸುವರ್ಣ ಸಂಭ್ರಮ ಮತ್ತು ರಜತ ಸಂಭ್ರಮವನ್ನು ನೆಲ್ಯಾಡಿಯಲ್ಲಿ ಆಚರಿಸಲಾಯಿತು. “ಆದ್ಯಾತ್ಮ ಮತ್ತು ಸೇವೆಯ ಮೂಲಕ ಭಗೀನಿಯರು ಪ್ರಭು ಯೇಸುಕ್ರಿಸ್ತನ ಜೀವನ ಮತ್ತು ಅವರ ಬದುಕಿನ ನೇರ ಪ್ರಾತ್ಯಕ್ಷತೆ ತಮ್ಮ ಬದುಕಿನಲ್ಲಿ ಒದಗಿಸುತ್ತಿದ್ದಾರೆ,” ಎಂದು ಇವರನ್ನು ಅಭಿನಂದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.

ಸಮಾರಂಭದಲ್ಲಿ ಸಿಸ್ಟರ್ ಫಿಲೋಮಿನ ಕುರಿಯನ್ ಮತ್ತು ಸಿಸ್ಟರ್ ಆನಿ ಕುರಿಯನ್ ಸುವರ್ಣ ಸಂಭ್ರಮವನ್ನು ಹಾಗೂ ಸಿಸ್ಟರ್ ಮೇಬಿಲ್ ಜೋನ್ ಮತ್ತು ಸಿಸ್ಟರ್ ಜಿನ್ಸಿ ರೋಸ್ ರಜತ ಮಹೋತ್ಸವವನ್ನು ಆಚರಿಸಿದರು. ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಹಾಗೂ ರಿಜಿನಲ್ ಸುಪೀರಿಯರ್ ಲಿಸ್ ಮಾತ್ಯು ಶುಭ ಕೋರಿದರು. ಹೆಗ್ಗಳದ ವಂದನೀಯ ಫಾ. ರೋಷನ್ ಪುದುಶೇರಿ ಮತ್ತು ಬಜಗೋಳಿಯ ಫಾ. ತೋಮಸ್ ಪಾರೆಕಾಟ್ಟಿಲ್ ಬಲಿಪೂಜೆಯಲ್ಲಿ ಭಾಗವಹಿಸಿದರು. ವಂದನೀಯ ಸಿಸ್ಟರ್ ಎಲ್ಸಿಲಿಟ್, ಸಿಸ್ಟರ್ ಬ್ಲೆಸಿಮರಿಯ, ಸಿಸ್ಟರ್ ಆಲ್ಫಿ, ಸಿಸ್ಟರ್ ತೆರೆಸ್ ಕುರಿಯನ್, ಸಿಸ್ಟರ್ ಆಲಿಸ್, ಸಿಸ್ಟರ್ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

ಅ.31: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ದೀಪಾವಳಿ ದೋಸೆಹಬ್ಬ ಹಾಗೂ ಗೋ ಪೂಜಾ ಉತ್ಸವ

Suddi Udaya

ಕುಕ್ಕೇಡಿ: ಪಂಡಿಜೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಚತಾ ಕಾರ್ಯಕ್ರಮ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಶೇ. 73.64 ಮತದಾನ

Suddi Udaya

ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಹಾಗೂ ಮಚ್ಚಿನ ಗ್ರಾ.ಪಂ. ನಿಂದ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ

Suddi Udaya

ಶ್ರೀ ರಾಮಲಾಲ್ಲಾನ ಪ್ರಾಣ ಪ್ರತಿಷ್ಠೆ: ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಶ್ರೀ ರಾಮೋತ್ಸವ: ಸುರಕ್ಷಾ ಆಚಾರ್ಯ ರವರ ಕೈಚಳಕದಲ್ಲಿ ಸುಂದರವಾಗಿ ಮೂಡಿಬಂದ ರಾಮಮಂದಿರ

Suddi Udaya
error: Content is protected !!