23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೋಣಂದೂರು: ಸಬರಬೈಲು ಕುವ್ವತುಲ್ ಇಸ್ಲಾಮ್ ಯುವಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಸೋಣಂದೂರು : ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ ಸಬರಬೈಲು ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಕಾರ್ಯಕ್ರಮವನ್ನು ಹಿರಿಯರಾದ ಮಹಮ್ಮದ್ ಸಾಗರ್ ಹಾಜಿಯವರು ದುವಾದೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಜುಮಾ‌ ಮಸೀದಿ ಮದ್ದಡ್ಕ ಇದರ ಪ್ರಧಾನ‌ ಕಾರ್ಯದರ್ಶಿಗಳಾದ ಸಿರಾಜ್ ಚಿಲಿಂಬಿಯವರು ಮಾತನಾಡಿ ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ 1998 ರಿಂದ ನಡೆದು ಬಂದ ಬಗ್ಗೆ ಮತ್ತು ಅದರ ಕಾರ್ಯ ವೈಖರಿಯನ್ನು ತಿಳಿಸಿದರು.

ನೂತನ ಪದಾಧಿಕಾರಿಗಳಾಗಿ ಕೆ ಐ ವೈ ಎಸ್ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಕೆ ಎಸ್ ಆರ್ ಟಿ ಸಿ ಸಬರಬೈಲು, ಉಪಾಧ್ಯಕ್ಷರಾಗಿ ಶಕೀಲ್‌ ಸಬರಬೈಲು, ಕಾರ್ಯದರ್ಶಿಯಾಗಿ ಫಯಾಝ್ ಸಬರಬೈಲು, ಜೊತೆ ಕಾರ್ಯದರ್ಶಿಯಾಗಿ ನೌಶಾದ್ ಸಬರಬೈಲು, ಕೋಶಾಧಿಕಾರಿಯಾಗಿ ಶರೀಫ್ ಸಬರಬೈಲು ಇವರನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಮಹಮ್ಮದ್ ಸಾಗರ್ ಹಾಜಿ ಮತ್ತು ಸಲಹೆಗಾರರಾಗಿ ಸಲೀಮ್ ತಂಙಲ್ ಎo ಎ. ರಝಕ್ ಸಬರಬೈಲು, ಅಬ್ದುಲ್ಲಾ ಎಸ್ ಎ ಸಬರಬೈಲು, ರಮ್ಲನ್, ಇಲ್ಯಾಸ್ ಝಹೀರ್ ಬಿನ, ಇಬ್ರಾಹಿಮ್ ಕೆ ಎಸ್ ಬಿ, ಶಂಸುದ್ದೀನ್ ಭೂಲೋಕ, ರಿಯಾಝ್ ಎಚ್ ಎಚ್, ಸಮೀರ್ ಸಬರಬೈಲು ಇವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.


ನೌಶಾದ್ ಎo ಎo ಕಾರ್ಯಕ್ರಮ ನಿರೂಪಿಸಿದರು. ನಿಯಾಝ್ ಸ್ವಾಗತಿಸಿ, ಹನೀಫ್ ಧನ್ಯವಾದ ಮಾಡಿದರು.

Related posts

ರಾಜಕೇಸರಿ ಟ್ರಸ್ಟ್ ವತಿಯಿಂದ ಪರಪಾದೆ ಶಾಲೆಯಲ್ಲಿ ಸ್ವಚ್ಛಾಲಯ ಅಭಿಯಾನ

Suddi Udaya

ಕಾಜೂರು: ಬೈಕ್ ಗೆ ಸ್ಕೂಟರ್ ಡಿಕ್ಕಿ: ಸವಾರನಿಗೆ ಗಾಯ

Suddi Udaya

ಭಾರೀ ಗಾಳಿ ಮಳೆ: ಮಿತ್ತಬಾಗಿಲು ವಿನಯಚಂದ್ರ ರವರ ಮನೆಗೆ ತೆಂಗಿನ ಮರ ಬಿದ್ದು ಹಾನಿ

Suddi Udaya

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೈ‌ ಕೊಟ್ಟ ವಿದ್ಯುತ್: ವೈದ್ಯರಿಂದ ಕತ್ತಲಲ್ಲಿ ರೋಗಿಗಳ ಆರೋಗ್ಯ ತಪಾಸಣೆ: ಇನ್ವರ್ಟರ್ ವ್ಯವಸ್ಥೆಗಳು ಇಲ್ಲದೆ ಟಾರ್ಚ್ ಬೆಳಕಿನಿಂದ ಚಿಕಿತ್ಸೆ ನೀಡಬೇಕಾದ ಸ್ಥಿತಿ

Suddi Udaya

ಕನ್ಯಾಡಿ ಗುರುದೇವ ಮಠದಲ್ಲಿ ಶಾಸಕ ಹರೀಶ್ ಪೂಂಜರಿಂದ ಸ್ವಾಮೀಜಿಯವರ ಪಾದ ಪೂಜೆ

Suddi Udaya

ಗೇರುಕಟ್ಟೆ ಮೋಕ್ಷಧಾಮ ಹಿಂದೂ ರುದ್ರಭೂಮಿ ಲೋಕಾರ್ಪಣೆ

Suddi Udaya
error: Content is protected !!