September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೋಣಂದೂರು: ಸಬರಬೈಲು ಕುವ್ವತುಲ್ ಇಸ್ಲಾಮ್ ಯುವಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಸೋಣಂದೂರು : ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ ಸಬರಬೈಲು ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಕಾರ್ಯಕ್ರಮವನ್ನು ಹಿರಿಯರಾದ ಮಹಮ್ಮದ್ ಸಾಗರ್ ಹಾಜಿಯವರು ದುವಾದೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಜುಮಾ‌ ಮಸೀದಿ ಮದ್ದಡ್ಕ ಇದರ ಪ್ರಧಾನ‌ ಕಾರ್ಯದರ್ಶಿಗಳಾದ ಸಿರಾಜ್ ಚಿಲಿಂಬಿಯವರು ಮಾತನಾಡಿ ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ 1998 ರಿಂದ ನಡೆದು ಬಂದ ಬಗ್ಗೆ ಮತ್ತು ಅದರ ಕಾರ್ಯ ವೈಖರಿಯನ್ನು ತಿಳಿಸಿದರು.

ನೂತನ ಪದಾಧಿಕಾರಿಗಳಾಗಿ ಕೆ ಐ ವೈ ಎಸ್ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಕೆ ಎಸ್ ಆರ್ ಟಿ ಸಿ ಸಬರಬೈಲು, ಉಪಾಧ್ಯಕ್ಷರಾಗಿ ಶಕೀಲ್‌ ಸಬರಬೈಲು, ಕಾರ್ಯದರ್ಶಿಯಾಗಿ ಫಯಾಝ್ ಸಬರಬೈಲು, ಜೊತೆ ಕಾರ್ಯದರ್ಶಿಯಾಗಿ ನೌಶಾದ್ ಸಬರಬೈಲು, ಕೋಶಾಧಿಕಾರಿಯಾಗಿ ಶರೀಫ್ ಸಬರಬೈಲು ಇವರನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಮಹಮ್ಮದ್ ಸಾಗರ್ ಹಾಜಿ ಮತ್ತು ಸಲಹೆಗಾರರಾಗಿ ಸಲೀಮ್ ತಂಙಲ್ ಎo ಎ. ರಝಕ್ ಸಬರಬೈಲು, ಅಬ್ದುಲ್ಲಾ ಎಸ್ ಎ ಸಬರಬೈಲು, ರಮ್ಲನ್, ಇಲ್ಯಾಸ್ ಝಹೀರ್ ಬಿನ, ಇಬ್ರಾಹಿಮ್ ಕೆ ಎಸ್ ಬಿ, ಶಂಸುದ್ದೀನ್ ಭೂಲೋಕ, ರಿಯಾಝ್ ಎಚ್ ಎಚ್, ಸಮೀರ್ ಸಬರಬೈಲು ಇವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.


ನೌಶಾದ್ ಎo ಎo ಕಾರ್ಯಕ್ರಮ ನಿರೂಪಿಸಿದರು. ನಿಯಾಝ್ ಸ್ವಾಗತಿಸಿ, ಹನೀಫ್ ಧನ್ಯವಾದ ಮಾಡಿದರು.

Related posts

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸ: ಬಿ.ಪಿ.ಹೆಚ್ ಲ್ಯಾಬ್ ಮತ್ತು 12 ಬೆಡ್ ಗಳ ಐಸೋಲೇಶನ್ ವಾರ್ಡ್ ಕಟ್ಟಡ ಉದ್ಘಾಟನೆ

Suddi Udaya

ಉಜಿರೆ ವಲಯದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳ ಮುಂದೂಡಿಕೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿಗೆ ಶೇ. 98.8 ಫಲಿತಾಂಶ

Suddi Udaya

ಗುಡ್ಡ ಕುಸಿತದಂಥ ಪ್ರಕರಣ ಮತ್ತು ತಜ್ಞರ ಅಧ್ಯಯನ ವರದಿಗಳು ಭೂಕುಸಿತದ ಘೋರ ಪರಿಣಾಮಗಳನ್ನು ಜನರ ಮುಂದಿಟ್ಟಿದ್ದು ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ರವರಿಂದ ಸಭಾಪತಿಗಳಿಗೆ ಮನವಿ

Suddi Udaya

ಮೃತದೇಹ ಹೂತು ಹಾಕಿದ ಪ್ರಕರಣ ಮೊದಲು ಗುರುತಿಸಿದ ಸ್ಥಳದಲ್ಲಿ ಮೊದಲ ದಿನದ ಕಾರ್ಯಾಚರಣೆ ಮುಕ್ತಾಯ

Suddi Udaya
error: Content is protected !!