25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಮಾಲಾಡಿ: ಜ್ವರದಿಂದ ಬಳಲಿ ಯುವಕ ಮೃತ್ಯು

ಮಾಲಾಡಿ: ಜ್ವರ ಹಾಗೂ ಕೆಮ್ಮುನಿಂದ ಬಳಲುತ್ತಿದ್ದ ಮಾಲಾಡಿ ಗ್ರಾಮದ ನಿವಾಸಿ ಚೇತನ್ (೨೫ವ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.೧೨ರಂದು ವರದಿಯಾಗಿದೆ.


ಚೇತನ್ ಅವರು ಸುಮಾರು ೧೦-೧೫ ದಿನಗಳಿಂದ ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿದ್ದು ಈ ಬಗ್ಗೆ ಸ್ಥಳಿಯ ವೈದ್ಯರಿಂದ ಔಷದೋಪಚಾರ ಮಾಡಿದರೂ ಕೂಡಾ ಜ್ವರ ಕಡಿಮೆಯಾಗದೇ ಇದ್ದುದರಿಂದ ನ.೧೨ ರಂದು ಮಧ್ಯಾಹ್ನ ಬಂಟ್ವಾಳ ಆಸ್ಪತ್ರೆಗೆ ಹೋಗಿ ಜೌಷಧಿ ತಂದಿದ್ದರು. ಸಂಜೆ ಸಹೋದರ ಮಿಥುನ್ ತನ್ನ ದೊಡ್ಡಪ್ಪನ ಮಕ್ಕಳಾದ ವಿವೇಕ್ ಹಾಗೂ ಅಶೋಕ್ ಕುಮಾರ್ ರವರೊಂದಿಗೆ ಮನೆ ಸಮೀಪವಿರುವ ಸರ್ವಿಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಲ್ಲಿಗೆ ಬಂದ ಚೇತನ್ ನಾನು ಬಂಟ್ವಾಳ ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡು ಬಂದಿದ್ದೇನೆ. ನನಗೆ ತುಂಬಾ ಸುಸ್ತು ಅಗುತ್ತಿದೆ ಎಂದು ಹೇಳುತ್ತಾ, ಒಮ್ಮೆಲೆ ವಾಂತಿ ಮಾಡಲು ಪ್ರಾರಂಭಿಸಿದ್ದು, ಕೂಡಲೇ ಅವರ ಸಹೋದರ ಮಿಥುನ್ ಹಾಗೂ ದೊಡ್ಡಪ್ಪನ ಮಕ್ಕಳು ಉಪಚರಿಸಿ ಚಿಕಿತ್ಸೆ ಬಗ್ಗೆ ಮಡಂತ್ಯಾರಿಗೆ ಕರೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪುಂಜಾಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಲಿಕಾ ಹಬ್ಬ ಮಕ್ಕಳ ಪ್ರತಿಭೆಗಳ ಅನಾವರಣ

Suddi Udaya

ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ : ವಿಶೇಷ ಪೂಜೆ ಸಲ್ಲಿಸಿದ ಸಚಿವ ದಂಪತಿ

Suddi Udaya

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

Suddi Udaya

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

Suddi Udaya

ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಚರಣೆ : ಬಿಜೆಪಿ ಗರ್ಡಾಡಿ ಶಕ್ತಿ ಕೇಂದ್ರ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಶಿಬಾಜೆ: ಫೆ.5-6 ರಂದು ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ಸನ್ನಿದಿಯಲ್ಲಿ ನಡೆಯುವ ಶತ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ:ಶ್ರೀ ಕ್ಷೇತ್ರದಲ್ಲಿ 64ವರ್ಷದ ಬಳಿಕ ನಡೆಯುತ್ತಿರುವ ಯಾಗ

Suddi Udaya
error: Content is protected !!