23.2 C
ಪುತ್ತೂರು, ಬೆಳ್ತಂಗಡಿ
April 6, 2025
ಗ್ರಾಮಾಂತರ ಸುದ್ದಿ

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

  • ವಿಕಾಲಾಂಗರಿಗೆ ನೆರವು-ವಿದ್ಯಾ ಪ್ರೋತ್ಸಾಹ ಧನ ಹಸ್ತಾಂತರ

ಮಿತ್ತಬಾಗಿಲು: ಹರ್ಝತ್ ಸೈದಾನಿ ಬೀಬಿ ದರ್ಗಾ ವಠಾರದಲ್ಲಿ ನ 25 ರಂದು ಗುರುವಾರ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ ಜರಗಿದ್ದು ನೂರಾರು ಭಕ್ತರು ಸಾಕ್ಷಿಗಳಾಗಿದ್ದರು.

ಸಂಸ್ಥೆಯು ಅಂಗವಿಕಲರಿಗೆ, ಅಸಹಾಯಕ ನಿರ್ಗತಿಕರಿಗೆ, ವಿಧವೆಯರಿಗೆ, ವಿಧ್ಯಾಭ್ಯಾಸಕ್ಕೆ ಮತ್ತು ಬಡ ಮಕ್ಕಳ ಮದುವೆಗಾಗಿ ಪ್ರತಿ ತಿಂಗಳು ಸಹಾಯಮಾಡುತ್ತಿದ್ದು ಸ್ವಲಾತ್ ಸಂದರ್ಭದಲ್ಲಿ ಸಂಪೂರ್ಣ ಅಂಗವಿಕಲರಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿಯವರಾದ ನಾರಾಯಣ ಗೌಡ ಎಂಬವರ ಪರವಾಗಿ ಅವರ ಪತ್ನಿ ಶ್ರೀಮತಿ ಕುಸುಮಾವತಿಯವರಿಗೆ 2024ನೇ ಇಸವಿಯ ಜೂನ್ ತಿಂಗಳಿನಿಂದ ಮಾಸಿಕ ರೂ.2000/- ಯಂತೆ ಅಂಗವಿಕಲರಿಗಾಗುವ ಸಹಾಯದನದ ಪ್ರಥಮ ಕಂತನ್ನು ವಿತರಿಸಲಾಯಿತು.

ಅದೇ ರೀತಿ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ. ಪಿ.ಕವನ ಶ್ರೀ ಎಂಬವಳಿಗೆ ವಿದ್ಯಾಭ್ಯಾಸಕ್ಕಾಗಿ ರೂ.5000/- ಸಹಾಯದವನ್ನು ಅವಳ ಪರವಾಗಿ ಪಾವತಿಸಲಾಯಿತು. ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮುಷ್ಕನ್ ಕೌಸರ್ ರಾಜ್ಯದಲ್ಲಿ 7 ನೇ Rank ಪಡೆದಿದ್ದು ಅವಳಿಗೆ ರೂ.25000/- ಚೆಕ್ ಮುಖಾಂತರ ವಿತರಿಸಲಾಯಿತು.

Related posts

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಬಾಯ೯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಂದ ಭಜನಾ ಸಂಕೀರ್ತನೆ

Suddi Udaya

ವಿಪರೀತ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕೊಲ್ಲಿಯ ನೇತ್ರಾವತಿ ನದಿ

Suddi Udaya

ಇಂಗ್ಲೆಂಡ್ ನಲ್ಲಿ ಗುರುವಾಯನಕೆರೆಯ 12 ವರ್ಷದ ಬಾಲಕನ ಮಹಾನ್ ಸಾಧನೆ- ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ನ 4ನೇ ಸುತ್ತಿನಲ್ಲಿ ಪ್ರಶಸ್ತಿ ಪಡೆದ ಕಾರ್ ರೇಸರ್ ಕನಿಷ್ಕ್ ರಾವ್

Suddi Udaya

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಸಹಕಾರಿ ಭಾರತೀಯ ಜಗದೀಶ್ ಶೆಟ್ಟಿ ಮೈರ ಆಯ್ಕೆ: ಕಾಂಗ್ರೆಸ್ ಬೆಂಬಲಿತ ಜಯವಿಕ್ರಮ್ ಗೆ ಸೋಲು

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ