26.9 C
ಪುತ್ತೂರು, ಬೆಳ್ತಂಗಡಿ
April 23, 2026
ಗ್ರಾಮಾಂತರ ಸುದ್ದಿ

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

  • ವಿಕಾಲಾಂಗರಿಗೆ ನೆರವು-ವಿದ್ಯಾ ಪ್ರೋತ್ಸಾಹ ಧನ ಹಸ್ತಾಂತರ

ಮಿತ್ತಬಾಗಿಲು: ಹರ್ಝತ್ ಸೈದಾನಿ ಬೀಬಿ ದರ್ಗಾ ವಠಾರದಲ್ಲಿ ನ 25 ರಂದು ಗುರುವಾರ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ ಜರಗಿದ್ದು ನೂರಾರು ಭಕ್ತರು ಸಾಕ್ಷಿಗಳಾಗಿದ್ದರು.

ಸಂಸ್ಥೆಯು ಅಂಗವಿಕಲರಿಗೆ, ಅಸಹಾಯಕ ನಿರ್ಗತಿಕರಿಗೆ, ವಿಧವೆಯರಿಗೆ, ವಿಧ್ಯಾಭ್ಯಾಸಕ್ಕೆ ಮತ್ತು ಬಡ ಮಕ್ಕಳ ಮದುವೆಗಾಗಿ ಪ್ರತಿ ತಿಂಗಳು ಸಹಾಯಮಾಡುತ್ತಿದ್ದು ಸ್ವಲಾತ್ ಸಂದರ್ಭದಲ್ಲಿ ಸಂಪೂರ್ಣ ಅಂಗವಿಕಲರಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿಯವರಾದ ನಾರಾಯಣ ಗೌಡ ಎಂಬವರ ಪರವಾಗಿ ಅವರ ಪತ್ನಿ ಶ್ರೀಮತಿ ಕುಸುಮಾವತಿಯವರಿಗೆ 2024ನೇ ಇಸವಿಯ ಜೂನ್ ತಿಂಗಳಿನಿಂದ ಮಾಸಿಕ ರೂ.2000/- ಯಂತೆ ಅಂಗವಿಕಲರಿಗಾಗುವ ಸಹಾಯದನದ ಪ್ರಥಮ ಕಂತನ್ನು ವಿತರಿಸಲಾಯಿತು.

ಅದೇ ರೀತಿ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ. ಪಿ.ಕವನ ಶ್ರೀ ಎಂಬವಳಿಗೆ ವಿದ್ಯಾಭ್ಯಾಸಕ್ಕಾಗಿ ರೂ.5000/- ಸಹಾಯದವನ್ನು ಅವಳ ಪರವಾಗಿ ಪಾವತಿಸಲಾಯಿತು. ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮುಷ್ಕನ್ ಕೌಸರ್ ರಾಜ್ಯದಲ್ಲಿ 7 ನೇ Rank ಪಡೆದಿದ್ದು ಅವಳಿಗೆ ರೂ.25000/- ಚೆಕ್ ಮುಖಾಂತರ ವಿತರಿಸಲಾಯಿತು.

Related posts

ವಲಯ ಮಟ್ಟದ ಪ್ರತಿಭಾ ಕಾರಂಜಿ : ಸ್ಟಾರ್ ಲೈನ್ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಇಂದು(ಜ.6): ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಸಮುದ್ರ ಮಥನ ಸೇವೆಯಾಟ : ಶ್ರೀ ಮಹಾಗಣಪತಿ ದೇವರಿಗೆ “ಮೂಡಪ್ಪ ಸೇವೆ”

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಬೆಳ್ತಂಗಡಿ ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ 16ನೇ ವರ್ಷದ ಸಾಂಸ್ಕೃತಿಕ ವೈಭವ , ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ-2026 ಪ್ರದಾನ

Suddi Udaya

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ಆಯ್ಕೆ

Suddi Udaya

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ಎಸ್ .ಐ.ಟಿ ತನಿಖೆಗೆ ಆಗ್ರಹ: ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ ಆರಂಭ

Suddi Udaya
error: Content is protected !!