22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

  • ವಿಕಾಲಾಂಗರಿಗೆ ನೆರವು-ವಿದ್ಯಾ ಪ್ರೋತ್ಸಾಹ ಧನ ಹಸ್ತಾಂತರ

ಮಿತ್ತಬಾಗಿಲು: ಹರ್ಝತ್ ಸೈದಾನಿ ಬೀಬಿ ದರ್ಗಾ ವಠಾರದಲ್ಲಿ ನ 25 ರಂದು ಗುರುವಾರ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ ಜರಗಿದ್ದು ನೂರಾರು ಭಕ್ತರು ಸಾಕ್ಷಿಗಳಾಗಿದ್ದರು.

ಸಂಸ್ಥೆಯು ಅಂಗವಿಕಲರಿಗೆ, ಅಸಹಾಯಕ ನಿರ್ಗತಿಕರಿಗೆ, ವಿಧವೆಯರಿಗೆ, ವಿಧ್ಯಾಭ್ಯಾಸಕ್ಕೆ ಮತ್ತು ಬಡ ಮಕ್ಕಳ ಮದುವೆಗಾಗಿ ಪ್ರತಿ ತಿಂಗಳು ಸಹಾಯಮಾಡುತ್ತಿದ್ದು ಸ್ವಲಾತ್ ಸಂದರ್ಭದಲ್ಲಿ ಸಂಪೂರ್ಣ ಅಂಗವಿಕಲರಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿಯವರಾದ ನಾರಾಯಣ ಗೌಡ ಎಂಬವರ ಪರವಾಗಿ ಅವರ ಪತ್ನಿ ಶ್ರೀಮತಿ ಕುಸುಮಾವತಿಯವರಿಗೆ 2024ನೇ ಇಸವಿಯ ಜೂನ್ ತಿಂಗಳಿನಿಂದ ಮಾಸಿಕ ರೂ.2000/- ಯಂತೆ ಅಂಗವಿಕಲರಿಗಾಗುವ ಸಹಾಯದನದ ಪ್ರಥಮ ಕಂತನ್ನು ವಿತರಿಸಲಾಯಿತು.

ಅದೇ ರೀತಿ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ. ಪಿ.ಕವನ ಶ್ರೀ ಎಂಬವಳಿಗೆ ವಿದ್ಯಾಭ್ಯಾಸಕ್ಕಾಗಿ ರೂ.5000/- ಸಹಾಯದವನ್ನು ಅವಳ ಪರವಾಗಿ ಪಾವತಿಸಲಾಯಿತು. ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮುಷ್ಕನ್ ಕೌಸರ್ ರಾಜ್ಯದಲ್ಲಿ 7 ನೇ Rank ಪಡೆದಿದ್ದು ಅವಳಿಗೆ ರೂ.25000/- ಚೆಕ್ ಮುಖಾಂತರ ವಿತರಿಸಲಾಯಿತು.

Related posts

ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಕನ್ಯಾನ ಸದಾಶಿವ ಶೆಟ್ಟಿಯವರ ತೀರ್ಮಾನ ಸಂತಸ ತಂದಿದೆ: ಸಂದೀಪ್ ಶೆಟ್ಟಿ ಮಂದರ್ಸ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ಅಂತರಾಷ್ಟ್ರೀಯ ಯುವ ಶೃಂಗಸಭೆಯಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನನ್ನು ಪ್ರತಿನಿಧಿಸಿದ ಡಾ. ವಾಜಿದ ಬಾನು

Suddi Udaya

ನ.14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಂದ ಶ್ರೀ ಕ್ಷೇ.ಧ.ಗ್ರಾ.ಯೋ. ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

Suddi Udaya

ಫುಟ್ಬಾಲ್ ಪಂದ್ಯಾಟ: ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!