September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗೋವಾದಲ್ಲಿ ಯಕ್ಷ ಕಲರವ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಬೆಳ್ತಂಗಡಿ: ಉತ್ತರ ಗೋವಾದ ಪರ್ವಾರಿ ಪುಂಡಲೀಕ ದೇವಸ್ಥಾನದ ಸಭಾ ಗ್ರಹದಲ್ಲಿ ತುಳುನಾಡಿನ ಗಂಡು ಮೆಟ್ಟಿನ ಕಲೆ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಯಕ್ಷಗಾನ ಮೇಳದ ಮೂರನೇ ವರ್ಷದ ಯಕ್ಷಗಾನ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಚಾಲನೆ ನೀಡಿದರು.

ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಾಜಿ ಅಧ್ಯಕ್ಷ ಜಯಂತ ನಡುಬೈಲ್, ಉದ್ಯಮಿ ಮೋಹನ್ ಶೆಟ್ಟಿ, ಗೋವಾ ತುಳುಕೂಟದ ಅಧ್ಯಕ್ಷ ಗಣೇಶ ಇರುವತ್ತೂರು, ಯಕ್ಷಗಾನ ಸಂಚಾಲಕರಾದ ಪ್ರಶಾಂತ ಪೂಜಾರಿ ಮಸ್ಕತ್, ನವೀನ್ ಸುವರ್ಣ, ಜಯಾನಂದ ಎಂ, ಜಯರಾಮ ಬಂಗೇರ ನಾರಾಯಣ ಮಚ್ಚಿನ , ಗೋವಾ ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಗೋವಾ ರಾಜ್ಯದಲ್ಲಿ ಸಮಾಜದ ಸದಸ್ಯರನ್ನು ಸಂಘಟಿಸಿದ್ದ , ಗೌರವಾಧ್ಯಕ್ಷ ಚಂದ್ರ ಹಾಸ ಅಮೀನ್ ದಂಪತಿಗಳನ್ನು ಕ್ಷೇತ್ರದ ವತಿಯಿಂದ ಅಭಿನಂದಿಸಲಾಯಿತು.. ಬಳಿಕ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ ಮಂಡಳಿಯಿಂದ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಎಂಬ ಐತಿಹಾಸಿಕ ಯಕ್ಷಗಾನ ಪ್ರಸಂಗ ವಿಜೃಂಭಣೆಯಿಂದ ನಡೆಯಿತು.

Related posts

ಕುಂಭಶ್ರೀ ಪಿಯು ಕಾಲೇಜಿನಲ್ಲಿ ಸಿಎ ಓರಿಯಂಟೇಶನ್ 2K25 ವಿಶೇಷ ಕಾರ್ಯಾಗಾರ

Suddi Udaya

ಫೆ.29-ಮಾ.2ರವರೆಗೆ ನಡೆಯಲಿರುವ ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಮ್ಮೇಳನಕ್ಕೆ ಕೊಕ್ಕಡದ ಸಿಬಂತಿ ಪದ್ಮನಾಭ

Suddi Udaya

ಎಕ್ಸೆಲ್ ನಲ್ಲಿ ಮಾರ್ಚ್ 18 ರಿಂದ ನೀಟ್, ಜೆಇಇ , ಸಿಇಟಿ ಕ್ರ್ಯಾಶ್ ಕೋರ್ಸ್

Suddi Udaya

ಭಾರೀ ಮಳೆಗೆ ಬಂದಾರು ಪೇರಲ್ತಪಲಿಕೆಯಲ್ಲಿ ಗುಡ್ಡ ಜರಿದು ಹಾನಿ

Suddi Udaya

ಬೆಳ್ತಂಗಡಿ: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆಗಳ ಸಭೆ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ ವತಿಯಿಂದ ಮಂಗಳತೇರು ಶಾಲೆಯಲ್ಲಿ ನಾಯಕತ್ವ ಶಿಬಿರ

Suddi Udaya
error: Content is protected !!