July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುತ್ಲೂರು: ಅಡಿಕೆ ಬೆಳೆ ಕೊಳೆರೋಗ ನಿಯಂತ್ರಣ, ಎಲೆಚುಕ್ಕಿ ರೋಗದ ಬಗ್ಗೆ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ

ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯರಿಗೆ ಅಡಿಕೆ ಬೆಳೆ ಕೊಳೆರೋಗ ನಿಯಂತ್ರಿಸುವ ಬಗ್ಗೆ ಎಲೆಚುಕ್ಕಿ ರೋಗದ ಬಗ್ಗೆ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮವು ಕುತ್ಲೂರಿನ ಶ್ರೀ ದೇವಿ ಕೃಪಾದಲ್ಲಿ ನಡೆಯಿತು.

ಡಬ್ಲ್ಯೂಸಿ ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಕೆ.ರಾಮಚಂದ್ರಭಟ್ ಸ್ವಾಗತಿಸಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ದಲ್ಲಿ ಸಂಸ್ಥೆಯ ಮುಖಾಂತರ ಉಚಿತವಾಗಿ ಹತ್ತುಫಲಾನುಭವಿಗಳಿಗೆ ವಾಹನ ಚಾಲನ ತರಬೇತಿ ಕೊಡಿಸಿ ವಾಹನ ಚಾಲನ ಪರವಾನಿಗೆ ವಿತರಿಸಲಾಯಿತು. ಆಯ್ದ ಫಲನುಭವಿಗಳಿಗೆ ಎರಡು ಸಾವಿರ ಅಡಿಕೆ ಗಿಡ ತೆಂಗಿನ ಗಿಡ ನೂರು ಐನೂರು ಕೊಕೊ ಗಿಡಗಳನ್ನು ಉಚಿತವಾಗಿ ನೀಡಲಾಯಿತು. ಅಡಿಕೆಬೆಳೆಗಳಿಗೆ ತಗಲುವ ರೋಗಗಳ ಮತ್ತು ಅದರ ನಿಯಂತ್ರಿಸುವ ಮಾಹಿತಿ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆಲ್ಲ ಪ್ರಗತಿಪರ ಕೃಷಿಕರಾದ ಶೈಲೇಂದ್ರ ಮರಾಠೆ ಈದು ಮಾಹಿತಿ ನೀಡಿದರು.

ವೇಣೂರಿನ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ನಿರಂಜನ ವಾಹನ ಚಾಲನ ಬಗ್ಗೆಲ್ಲ ವಿವರಿಸಿದರು. ಪ್ರಮಿಳಾ ಆರ್ ಭಟ್ ಧನ್ಯವಾದವಿತ್ತರು. ಸುಮಾರು ಎಂಬತ್ತು ರೈತರು ಭಾಗವಹಿಸಿದ್ದರು.,

Related posts

ನಡ ಸ. ಪ್ರೌ.ಶಾಲೆಯಲ್ಲಿ ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ

Suddi Udaya

ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya

ಕಾಪಿನಡ್ಕ: ಕಾರು ಮತ್ತು ಆಟೋ ನಡುವೆ ಭೀಕರ ರಸ್ತೆ ಅಪಘಾತ-ಹಲವರಿಗೆ ಗಾಯ; ಆಸ್ಪತ್ರೆಗೆ ದಾಖಲು,

Suddi Udaya

ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಧರ್ಮಸ್ಥಳ ಪೊಲೀಸರ ದಾಳಿ : ಆರೋಪಿಯ ಬಂಧನ

Suddi Udaya

ಬಡಗಕಾರಂದೂರು ಸ.ಉ.ಪ್ರಾ.ಶಾಲೆಯ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶಾಲಾ ಎಸ್ ಡಿ ಎಂ ಸಿ ವತಿಯಿಂದ ಸಂಸದ ಬ್ರಿಜೇಶ್ ಚೌಟರವರಿಗೆ ಮನವಿ ಸಲ್ಲಿಕೆ

Suddi Udaya
error: Content is protected !!