ಬೆಳ್ತಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 27-29 ರವರೆಗೆ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡಮಾಡಲ್ಪಡುವ ಹವ್ಯಕ ವೇದರತ್ನ ಪ್ರಶಸ್ತಿಗೆ ಸುಳ್ಯದ ಅರಂಬೂರಿನಲ್ಲಿರುವ ವೇದಮೂರ್ತಿ ವೆಂಕಟೇಶ ಶಾಸ್ತ್ರಿಯವರು ಆಯ್ಕೆಯಾಗಿರುತ್ತಾರೆ.
ಪ್ರಸ್ತುತ ಅರಂಬೂರಿನ ಭಾರದ್ವಾಜಾಶ್ರಮದ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದು,ವೇದವಾಹಿನಿ ಎಂಬ ಆನ್ ಲೈನ್ ವೇದ ತರಗತಿಗಳ ಮೂಲಕ ವೇದಪಾಠವನ್ನು ದೇಶ ವಿದೇಶಗಳ ಶಿಷ್ಯರಿಗೆ ನಿರಂತರ 4 ವರ್ಷಗಳಿಂದ ನಡೆಸುತ್ತಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರುವಿನ ಪ್ರಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಹಾಗೂ ಶ್ರೀಮತಿ ಶಾರದಾ ದಂಪತಿಗಳ ಜ್ಯೇಷ್ಠ ಪುತ್ರ.













