July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಬೈ – ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಭ್ಯವಿದ್ದಂತಹ ವಿವಿಧ ಕೋರ್ಸ್ ಗಳೆಲ್ಲಾ ಇದೀಗ ಪುತ್ತೂರಿನಲ್ಲೂ: VFX, AI, SAP ಕೋರ್ಸ್ ಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ; ಅತೀ ಕಡಿಮೆ ಶುಲ್ಕದೊಂದಿಗೆ ನುರಿತ ತಂಡದಿಂದ ತರಬೇತಿ ನೀಡಲಿದೆ ವಿದ್ಯಾಮಾತಾ

ಪುತ್ತೂರು : ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ಹೊಸ ವರುಷದ ಸುಸಂದರ್ಭದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಹೊಸ -ಹೊಸ ಬಗೆಯ ತರಬೇತಿಯನ್ನು ಪರಿಚಯಿಸುವ ಪುಟ್ಟದೊಂದು ಪ್ರಯತ್ನ ಮಾಡಿದೆ.


ಪ್ರೌಢ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಥವಾ ಪಡೆಯುತ್ತಿರುವಂತಹ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಯಾರಿಗೊಳಿಸುವ ಹಾಗೂ ಶಿಕ್ಷಣದೊಂದಿಗೆ ಅತ್ಯುತ್ತಮ ಉದ್ಯೋಗ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅತ್ಯುತ್ತಮ ವೇದಿಕೆಯನ್ನು ಸಜ್ಜುಗೊಳಿಸಿ , ಅವರ ಭವಿಷ್ಯ ಬೆಳಗುವ ಕಾರ್ಯ ಕೈಗೆತ್ತಿಕೊಂಡಿದೆ.
ಯುವ ಸಮೂಹ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತಹ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯವೆಸಗುತ್ತಿದ್ದು , ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಿವಿಧ ಕೋರ್ಸ್ ಗಳನ್ನು ಪರಿಚಯಿಸುವ ಕಾಯಕವನ್ನು ಶುರು ಮಾಡಿದೆ.


ಗ್ರಾಮೀಣ ವಿದ್ಯಾರ್ಥಿಗಳಿಗೂ ಕೈಗೆಟಕುವ ಸೇವಾ ಶುಲ್ಕದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಿ , ನೂರಾರು ವಿದ್ಯಾರ್ಥಿಗಳು ಸರಕಾರಿ ಸೇವೆ ಸಲ್ಲಿಸುವಂತೆ ಅವರನ್ನು ಅಣಿಗೊಳಿಸಿರುವ ಕೀರ್ತಿ ವಿದ್ಯಾಮಾತಾ ಅಕಾಡೆಮಿಯ ತಂಡಕ್ಕೆ ಸಲ್ಲುತ್ತಿದ್ದು , ವಾಣಿಜ್ಯ ನಗರಿ ಮುಂಬೈ , ಸಿಲಿಕಾನ್ ಸಿಟಿ ಬೆಂಗಳೂರು ಸಹಿತ ಚೆನೈಯಂತಹ ಬೃಹತ್ ಮಹಾನಗರಗಳಲ್ಲಿ Visual Effect, Artificial Intelligence ಈ ಮೊದಲಾದ ತರಬೇತಿಯು ಅತೀ ದುಬಾರಿಯಾಗಿದ್ದು , ತರಬೇತಿ ಪಡೆಯಲು ಲಕ್ಷಾಂತರ ರೂ ವ್ಯಯಿಸಬೇಕಾಗಿರುತ್ತದೆ.


ಆದರೆ , ಇದೀಗ ಇದೇ ತರಬೇತಿಯನ್ನು ಹೆಸರಾಂತ ವಿದ್ಯಾಮಾತಾ ಕೂಡ ಆರಂಭಿಸಲು ಮುಂದೆ ಬಂದಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಹೆಚ್ಚು ಸಹಾಯವಾಗುವ ನಿಟ್ಟಿನಲ್ಲಿ ವಿನೂತನ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.
ತರಬೇತುದಾರರ ಗೌರವಧನ ಸಹಿತ ಕನಿಷ್ಠ ಸೇವಾ ಶುಲ್ಕದೊಂದಿಗೆ ಮೇಲಿನ ತರಬೇತಿಗಳನ್ನು ಈ ಕೂಡಲೇ ಪ್ರಾರಂಭಗೊಳ್ಳಲಿದ್ದು , ಆಸಕ್ತ ವಿದ್ಯಾರ್ಥಿಗಳು ಮತ್ತು ಯುವ ಜನತೆ ಈ ತರಬೇತಿಯ ಸದುಪಯೋಗ ಪಡೆಯುವಂತೆ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಿನಂತಿಸಿದ್ದಾರೆ.


ಲಭ್ಯವಿರುವ ತರಬೇತಿಗಳು :
VFX Plus , Graphics Pro , Graphics Prime , Artificial Hyper , Digital World , SAP-FICO , Tally Trade , Tax Fluence ಕೋರ್ಸ್ ಲಭ್ಯವಿದ್ದು , ಪ್ರವೇಶಾತಿಯೂ ಪ್ರಾರಂಭಗೊಂಡಿದೆ. ಇನ್ನೂ ಹೆಚ್ಚಿನ ವಿವರಗಳಿಗೆ ವಿದ್ಯಾಮಾತಾ ಅಕಾಡೆಮಿಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.


ಪುತ್ತೂರು :9148935808 , 96204 68869. ಸುಳ್ಯ ಶಾಖೆ : 9448527606 ಮತ್ತು ಕಾರ್ಕಳ ಶಾಖೆ : 8310484380 ಸಂಪರ್ಕಿಸಬಹುದು.

Related posts

ಮಣಿಪುರದಲ್ಲಿ ಮಹಿಳೆಯರ ಮೇಲಾದ ದೌಜ೯ನ್ಯಕ್ಕೆ ಖಂಡನೆ – ಬೆಳ್ತಂಗಡಿ ಕ್ರೈಸ್ತ ಸಂಘಟನೆಗಳ ಒಕ್ಕೂಟಗಳಿಂದ ಬೃಹತ್ ಪ್ರತಿಭಟನೆ- ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ – ಮಣಿಪುರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹ- ಜಡಿಮಳೆಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಭಾಗಿ

Suddi Udaya

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕಾರ್ಯಾಗಾರ

Suddi Udaya

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಅದ್ದೂರಿ ವ್ಯವಹಾರ ಸಮ್ಮೇಳನ 2025 – ಮೃದಂಗ

Suddi Udaya

ಕಳೆಂಜ: ಪಿಲತ್ತಡಿ ನಿವಾಸಿ ಪುಪ್ಪರಾಜ್ ಭಾರತೀಯ ಭೂಸೇನೆಗೆ ಆಯ್ಕೆ

Suddi Udaya

ಜು.16ರಿಂದ ಧರ್ಮಸ್ಥಳದಲ್ಲಿ 55ನೇ ವರ್ಷದ ಪುರಾಣ ವಾಚನ-ಪ್ರವಚನ

Suddi Udaya

ನಾರಾವಿ-ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಸಚಿವ ಗುಂಡೂರಾವ್ ಚಾಲನೆ

Suddi Udaya
error: Content is protected !!