23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ

ಉಜಿರೆ : ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಡಿ. 24ರಂದು ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಸಂಜೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ಏಸು ಕ್ರಿಸ್ತರು ಹುಟ್ಟಿದ ಗಾಯನಗಳು ಹಾಡಿ ಏಸು ಕ್ರಿಸ್ತರ ಜನದ ಸಂಭ್ರಮ ಪ್ರಾರಂಭ ವಾಯಿತು.

ದಿವ್ಯ ಬಲಿ ಪೂಜೆ ಮಂಗಳೂರಿನ ಜೆಪ್ಪು ಸೆಮಿನಾರಿಯ ಧರ್ಮ ಗುರು ವಂ. ಫಾ. ಐವನ್ ಡಿಸೋಜಾ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು. ನಾವೆಲ್ಲರೂ ಸಹೋದರತೆಯಿಂದ ಬಾಳಿ ಪರರಿಗೂ ಪ್ರೀತಿ ವಿಶ್ವಾಸ ದಿಂದ ನೆಲೆಸಬೇಕು. ನಾವು ನೀಡಿದ ಧಾನ ಧರ್ಮ ಗುಪ್ತವಾಗಿರಬೇಕೇ ಹೊರತು ಹತ್ತಾರು ಜನರಿಗೆ ಪ್ರಚಾರ ಪಡಿಸುವದಲ್ಲ ಮತ್ತು ಸಹಾಯ ಮಾಡಿದವರಿಂದ ಯಾರು ಪ್ರತಿಫಲ ನಿರೀಕ್ಸಿಸಬಾರದು ಆವಾಗ ಮಾತ್ರ ಕ್ರಿಸ್ತ ಜನ್ಮ ದಿನ ಆಚರಣೆ ಸಾರ್ಥಕವಾಗುತ್ತದೆ ಎಂದರು. ಚರ್ಚ್ ಪ್ರಧಾನ ಧರ್ಮ ಗುರು ವಂ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ದಿವ್ಯ ಬಲಿ ಪೂಜೆಯಲ್ಲಿ ಭಾಗವಿಸಿದ್ದರು. ಭಕ್ತಾದಿಗಳೆಲ್ಲರೂ ಏಸು ಸ್ವಾಮಿಯ ಮೂರ್ತಿಗೆ ಭಕ್ತಿಯಿಂದ ನಮಿಸಿದರು. ದಾನಿ ಗಳಿಗೆ ಮೇಣದ ಬತ್ತಿ ವಿತರಿಸಲಾಹಿತು. ಐ ಸಿ ವೈ ಎಂ ಸಂಘದಿಂದ ಕೇಕ್ ಡ್ರಾ, ಸಾಂತಾಕ್ಲಾಸ್, ಸುಡು ಮದ್ದು ಪ್ರದರ್ಶನ ನಡೆಯಿತು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಹಾಗೂ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸರ್ವ ರೀತಿಯಲ್ಲಿ ಸಹಕರಿಸಿದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ  ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನ ಕಾಯಿ ಗಣಹೋಮ ಹಾಗೂ ರಂಗಪೂಜೆ

Suddi Udaya

ಶಿರ್ಲಾಲು ಗ್ರಾಮ ಸಭೆ: ಶಿರ್ಲಾಲುವಿನಲ್ಲಿರುವ ಗೋಮಾಲಾ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ಧಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ದೊಂಡೊಲೆಯ ವಿಕಲಚೇತನ ಕುಟುಂಬಕ್ಕೆ ಸಹಾಯಹಸ್ತ : ಅರ್ಹರ ಸೇವೆಗೆ ಬೆಳ್ತಂಗಡಿ ಲಯನ್ಸ್ ತೆರೆದುಕೊಂಡಿದೆ-ವಲಯಾಧ್ಯಕ್ಷ ದಿನೇಶ್

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟ ಉದ್ಘಾಟನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ದುರ್ಗಾದೇವಿ ದೇವಸ್ಥಾನದ ನಾಗನ ಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!