32.6 C
ಪುತ್ತೂರು, ಬೆಳ್ತಂಗಡಿ
June 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿ ಸಭೆ

ಬೆಳ್ತಂಗಡಿ: ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿಯ ಮೊದಲನೇ ಸಭೆಯನ್ನು ಡಿ.೨೯ರಂದು ಕೊಡ್ಯೇಲು ಸಂಜೀವ ಶೆಟ್ಟಿಯವರ ಹಾಲ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ನೋಣಯ್ಯ ಶೆಟ್ಟಿ ಕೊಡ್ಯೇಲು ವಹಿಸಿದ್ದರು.

ಸಭೆಯಲ್ಲಿ ವಲಯ ಬಂಟರ ಸಂಘದ ಸಂಚಾಲಕ ರಮೇಶ್ ಶೆಟ್ಟಿ ಪೆರಿಂಜೆ, ವೇಣೂರು ವಲಯ ಬಂಟರ ಸಂಘದ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಕುಂಡಾಜೆ ಉಪಸ್ಥಿತರಿದ್ದರು.

ಮುಂದಿನ 2 ವರ್ಷದ ಅವಧಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಯಿತು. ಗ್ರಾಮದ ವಿವಿಧ ಗ್ರಾಮಗಳಿಗೆ ಜವಾಬ್ದಾರಿ ಸದಸ್ಯರುಗಳ ನೇಮಕವನ್ನು ಮಾಡಲಾಯಿತು.
ಅಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ, ಕಾರ್ಯದರ್ಶಿಯಾಗಿ ಶಿವರಾಜ್ ಶೆಟ್ಟಿ ಅಜ್ಜಾಡಿ, ಜೊತೆ ಕಾರ್ಯದರ್ಶಿಯಾಘಿ ಶಶಿಧರ ಶೆಟ್ಟಿ ಹಕ್ಕೇರಿ, ಕೋಶಾಧಿಕಾರಿಯಾಗಿ ಸತೀಶ್ ಶೆಟ್ಟಿ ಕುಂಜಾಡಿ, ಉಪಾಧ್ಯಕ್ಷರುಗಳಾಗಿ ವಿಶ್ವನಾಥ ಶೆಟ್ಟಿ ಐತ್ತೇರಿ, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ಶ್ರೀಮತಿ ಯಶೋಧ ಚಂದ್ರಶೇಖರ ಶೆಟ್ಟಿ ಪೂವಳ, ಗೌರವ ಸಲಹೆಗಾರರಾಗಿ ನೋಣಯ್ಯ ಶೆಟ್ಟಿ ಕೊಡ್ಯೇಲು, ರಮೇಶ್ ಎಂ. ಶೆಟ್ಟಿ ಉಗ್ರೋಡಿ, ಸಂದೀಪ್ ಶೆಟ್ಟಿ ಉಮನೊಟ್ಟು, ಜವಾಬ್ದಾರಿಯುತ ಸದಸ್ಯರುಗಳಾಗಿ ಕುಂಜಾಡಿ: ಹರೀಶ್ ಜೆ. ಶೆಟ್ಟಿ ಕುಂಜಾಡಿ, ಪೂಂಜ: ಸದಾಶಿವ ಶೆಟ್ಟಿ ಅಸನಬೆಟ್ಟು, ರವಿಪ್ರಸಾದ್ ಶೆಟ್ಟಿ, ಪಿಲಿಕಜೆ: ಶರತ್ ಶೆಟ್ಟಿ, ಧೀರಾಜ್ ಶೆಟ್ಟಿ, ಆರ್ಥಿಕ್ ಶೆಟ್ಟಿ, ಪಾಲ್ಯ: ಉಮೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಹಕ್ಕೇರಿ: ಸಚಿನ್ ಕೆ. ಶೆಟ್ಟಿ, ಶ್ರೀನಿಧಿ ಶೆಟ್ಟಿ, ಒಳಬೈಲು: ಬಾಲಕೃಷ್ಣ ಶೆಟ್ಟಿ, ವಿಜಯ ಶೆಟ್ಟಿ ಬರಾಯಿ, ಪೂವಳ: ಸಂದೀಪ್ ಶೆಟ್ಟಿ ಕುಂಡಾಜೆ, ಚಂದ್ರಶೇಖರ ಶೆಟ್ಟಿ, ಹೆನ್ನಿಮಾರ್: ಸುಜಿತ್ ಶೆಟ್ಟಿ, ರತನ್ ಶೆಟ್ಟಿ ಉಗ್ರೋಡಿ: ಪುಷ್ಪರಾಜ್ ಶೆಟ್ಟಿ ಇವರುಗಳು ಆಯ್ಕೆಯಾದರು.

Related posts

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

Suddi Udaya

ಕುಕ್ಕೇಡಿ: ಚಿರತೆ ದಾಳಿಗೆ ಹಸು ಬಲಿ

Suddi Udaya

ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ನೌಕರರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುಹಾಸ್ ಅಡಿಗ ಬೆಳ್ತಂಗಡಿ ಅವಿರೋಧವಾಗಿ ಆಯ್ಕೆ

Suddi Udaya

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya
error: Content is protected !!