July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ರಂಗಕಲೆಗಳ ಸ್ವರೂಪ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ರಂಗಕಲೆಗಳ ಸ್ವರೂಪ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕ ಕೇವಲ ಶಿಕ್ಷಣ ನೀಡುವ ಶಿಕ್ಷಕನಾಗಬಾರದು, ಬದಲು ಎಲ್ಲಾ ಲಘುತನಗಳನ್ನು ದಾಟಿ ಗುರುವಾಗಬೇಕು. ಮಕ್ಕಳ ಜೀವನದಲ್ಲಿನ ದಾರಿ ನೇರಗೊಳಿಸುವ ಗುರುವು ಆಗಬೇಕು. ಜಗತ್ತಿನ ಗುರುತನಗಳ ಸ್ವೀಕರಿಸುವ ಲಘುತನ ಎಲ್ಲಾ ಶಿಕ್ಷಕರಲ್ಲಿರಬೇಕು ಎಂದು ಓದು, ಬರಹ, ಹಾಡು, ಸುತ್ತಾಟ, ಕಲೆ ಹಾಗೂ ರಂಗಭೂಮಿ ಹೀಗೆ ನಾನಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ರಂಗಕಲಾವಿದ ನಾದ ಎಂಬ ನಾಮಾಂಕಿತರಾದ ಭಾಸ್ಕರ್ ಮಣಿನಾಲ್ಕೂರು ಮಾತನಾಡುತ್ತಾ ಕಲಿಸುವ ಗುರು ಸಣ್ಣವನಾದರೆ, ಕಲಿಯುವ ಶಿಷ್ಯನು ಸಣ್ಣತನಕ್ಕೆ ಸೀಮಿತನಾಗುತ್ತಾನೆ. ಈ ಜಗತ್ತಿನಲ್ಲಿ ಕಲಿಕೆಯು ಮುಗಿಯುವಂತಹದಲ್ಲ. ಗುರುವಾದವನು ಸೋತ ಮಕ್ಕಳ ಜೊತೆ ನಿಲ್ಲಬೇಕು ಎಂದು ತಮ್ಮ ಸುಮಧುರ ಗಾಯನ ಹಾಗೂ ಎಕ್ತಾರಿಯ ಗಾಯನದ ಮೂಲಕ ತಿಳಿಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಮಾತನಾಡಿ ಇತ್ತೀಚಿನ ಕಾಲದಲ್ಲಿ ಗುರುವನ್ನು ಕೇಳಿ ಕಲಿಯುವವರೇ ಹೆಚ್ಚು ಅದರ ಬದಲು ಗುರುವನ್ನು ನೋಡಿ ಕಲಿಯುವ ಹಂತಕ್ಕೆ ಗುರು ಬೆಳೆಯಬೇಕು. ಶಿಕ್ಷಕರು ಕೇವಲ ಆದರ್ಶಗಳನ್ನು ಕಲಿಸುವುದು ಮಾತ್ರವಲ್ಲದೆ ಅದನ್ನು ತಮ್ಮ ಜೀವನದಲ್ಲಿ ಅನುಸರಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ರಾಜಶೇಖರ್ ಹಳೆಮನೆ, ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಬಿ.ಎಡ್. ಪ್ರಶಿಕ್ಷಣಾರ್ಥಿ ತೇಜಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಅರಸಿನಮಕ್ಕಿ ವಲಯ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಕ್ಕೆ ವಾರ್ಷಿಕ ಲೆಕ್ಕ ಪರಿಶೋಧನೆಯ ಗ್ರೇಡಿಂಗ್ ಪತ್ರ ವಿತರಣೆ

Suddi Udaya

ಮೇ. 25ರಿಂದ ಮೆಟ್ರಿಕ್ ನಂತರ ಹಾಗೂ ಪೂರ್ವದ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಕೆ

Suddi Udaya

ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮುಂಜಾಗೃತ ಮಾಹಿತಿ

Suddi Udaya

ಸರಕಾರಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ: ಬೆಳ್ತಂಗಡಿ ಕಂದಾಯ ಇಲಾಖೆಯಿಂದ ತೆರವು ಕಾರ್ಯಾಚರಣೆ

Suddi Udaya

ಗುರಿಪಳ್ಳದಲ್ಲಿ ಜಾನುವರು ಕಟ್ಟಿದ್ದ ಹಗ್ಗ ಸಿಲುಕಿ ರಿಕ್ಷಾ ಪಲ್ಟಿ : ಚಾಲಕ ರಾಮಣ್ಣ ಗೌಡ ಹಾಗೂ ಪ್ರಯಾಣಿಕರಿಗೆ ಗಾಯ

Suddi Udaya

ಉಜಿರೆ: ಅತ್ತಾಜೆ ನಿವಾಸಿ ಜಂಶೀರ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!